ಗ್ರಾಮಸ್ಥರ ಪರವಾಗಿ ಬಾಳು ದೇವೂರ ಮಾತನಾಡಿ, ‘ಹೆಸರಿಗಷ್ಟೇ ಗ್ರಾಮಸಭೆ ಮಾಡಿದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಆಶ್ರಯ ಮನೆಗಳ ಮಂಜೂರಾತಿ ಕಾರ್ಯವನ್ನು ಶೀಘ್ರ ಮಾಡಬೇಕು. ಕುಡಿಯುವ ನೀರಿನ ಕೊರತೆ ಉಂಟಾಗಿ ನೀರಿಗಾಗಿ ಮನೆಮಂದಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೀಘ್ರ ಕುಡಿಯುವ ನೀರು ಪೂರೈಕೆ ಮಾಡಬೇಕು. ಪಿಡಿಓ ಅವರಿಗೆ ನಮ್ಮ ಸಮಸ್ಯೆಗಳು ಅರ್ಥವಾಗುವುದಿಲ್ಲ. ಏಕೆಂದರೆ ಅವರು ಬರುವುದೇ ಅಪರೂಪ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ವಿಫಲರಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.