ಸಾಹಿತಿ ನಬಿಲಾಲ್ ಮಕಾನದಾರ ಮಾತನಾಡಿ, ‘ಮಠ ಮಾನ್ಯಗಳು ಭಕ್ತಿಪಥದಲ್ಲಿ ಜ್ಞಾನ ದಾಸೋಹದ ಜತೆ ಜತೆಯಲ್ಲಿ ಅನ್ನದಾಸೋಹ ಮಾಡುತ್ತಿವೆ. ಭಕ್ತಿಪಥಕ್ಕೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯಿದೆ. ಭಕ್ತಿಪಥದಲ್ಲಿ ಸಂತರು, ಶರಣರು, ಸೂಫಿಗಳು ಬರುತ್ತಾರೆ. ಭಕ್ತಿಪಥಕ್ಕೆ ಯಾವುದೇ ಧರ್ಮದ ಲೇಪ ಇಲ್ಲ. ಮೂಲ ಭಗವಂತನನ್ನು ಸೇರುವುದು, ಪ್ರೀತಿಸುವುದು, ಆರಾಧಿಸುವುದು’ ಎಂದರು.