ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಅಂಬ್ಯುಲೆನ್ಸ್ ನೌಕರರು ವೇತನವಿಲ್ಲದೇ ಸಾಲ ಸೋಲ ಮಾಡಿ ಮಕ್ಕಳ ಶಾಲಾ–ಕಾಲೇಜು, ಬಾಡಿಗೆ ಕಟ್ಟಲು ಪರದಾಡುತ್ತಿದ್ದರು. ಸಮಸ್ಯೆ ಕುರಿತು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ದೀಕ್ಷಾ ಏಜೆನ್ಸಿ ವೇತನ ನೌಕರರಿಗೆ ಜಮಾ ಮಾಡಿದ್ದು, ನೌಕರರಿಗೆ ತಾತ್ಕಾಲಿಕ ಸಮಾಧಾನ ಮೂಡಿಸಿದೆ. ಆದರೆ, ಕೆಲವರಿಗೆ ಬಾಕಿ ಉಳಿಸಿಕೊಂಡಿರುವುದು ಅನುಮಾನ ಮೂಡಿಸಿದೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.