ಸಂಘಟನೆಯ ಜಿಲ್ಲಾ ಸಹಕಾರ್ಯದರ್ಶಿ ಜಮಾಲಸಭ್ ಮಾತನಾಡಿ, 'ಒಂದೆಡೆ ದೇಶವು ಕೋವಿಡ್ ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ನಮ್ಮನ್ನಾಳುವ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ಆಘಾತದ ಮೇಲೆ ಆಘಾತವನ್ನು ನೀಡುತ್ತಿವೆ. ಸರ್ಕಾರಗಳು ಜನತೆಯ ತೀವ್ರವಾದ ಕಷ್ಟದಲ್ಲಿರುವಾಗ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ಸತತವಾಗಿ ಹೆಚ್ಚಿಸುತ್ತಿದ್ದರೆ. ಗಾಯದ ಮೇಲೆ ಬರೆ ಎಳೆಯುವಂತ ವಂಚಕ ಹಾಗೂ ಹೀನಕೃತ್ಯವನ್ನು ಮಾಡುತ್ತಿರುವ ಸರ್ಕಾರಗಳ ಕ್ರಮವನ್ನು ರೈತ ಕಾರ್ಮಿಕ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದರು.