ವಡಗೇರಾ ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಕಳ್ಳಿ ಮಾತನಾಡಿ, ಮನುಷ್ಯ ಹಾಳಾಗುವುದಕ್ಕೆ ಎಷ್ಟು ಮಾರ್ಗಗಳಿವೆಯೋ ಅಷ್ಟೇ ಮಾರ್ಗಗಳು ಒಳ್ಳೆಯತನಕ್ಕಿವೆ. ಅಲ್ಲದೆ ಸಾಮಾಜಿಕವಾಗಿ ಒಳ್ಳೆಯದನ್ನು ಮಾಡುವ ಸಂಘ– ಸಂಸ್ಥೆಗಳು ಹೆಚ್ಚಾಗಿವೆ. ಅಂಥ ಸಂಘ ಸಂಸ್ಥೆಗಳಲ್ಲಿ ಸೋಮನಾಥರೆಡ್ಡಿಯವರು ನಡೆಸುವ ಬಸವ ಚಾರಿಟಬಲ್ ಟ್ರಸ್ಟ್ ಕೂಡಾ ಉಚಿತವಾಗಿ ಯೋಗ ಶಿಬಿರಗಳನ್ನು ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.