ಕಲ್ಲಡ್ಕದಲ್ಲಿ ಸೋಮವಾರ ಮಾತನಾಡಿದ್ದ ಸುನಿಲ್ ಕುಮಾರ್, ‘ಮುಂದಿನ ಚುನಾವಣೆ ರಮಾನಾಥ ರೈ ಹಾಗೂ ರಾಜೇಶ್ ನಾಯ್ಕ್ ಮಧ್ಯೆ ಅಲ್ಲ, ಬದಲಿಗೆ ರಾಮ ಬೇಕೋ, ಇಲ್ಲ ಅಲ್ಲಾಹು ಬೇಕೋ ಎಂದು ನಿರ್ಧರಿಸಬೇಕು’ ಎಂದಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಂಗಳವಾರ ಇಲ್ಲಿ ಅವರು ಪ್ರತಿಕ್ರಿಯಿಸಿದರು.