ಬಾರಾಮತಿ ಕ್ಷೇತ್ರವು ಎನ್ಸಿಪಿ (ಶರದ್ ಪವಾರ್ ಬಣ)ದ ಭದ್ರಕೋಟೆಯಾಗಿದ್ದು, ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಅವರನ್ನು ಮಹಾ ‘ವಿಕಾಸ ಅಘಾಡಿ ಕೂಟ’ವು ಅಭ್ಯರ್ಥಿಯಾಗಿ ಘೋಷಿಸಿದೆ. ಏಕನಾಥ ಶಿಂದೆ ಜೊತೆಗಿರುವ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರು ‘ಮಹಾಯುತಿ’ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಿವತಾರೆ ಘೋಷಣೆ ಮಾಡಿದ್ದು, ಆಡಳಿತಾರೂಢ ಎನ್ಸಿಪಿ ಮತ್ತು ಶಿವಸೇನಾ (ಅಜಿತ್ ಪವಾರ್ ಬಣ) ಕೂಟದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿತ್ತು.