ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಂಬರೀಷ್ ಬದುಕಿದ್ದಾಗ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ನಮಗೆ ಊಟ ಬಡಿಸಿದ್ದಾರೆ. ರಾಜಕೀಯ ಸನ್ನಿವೇಶ, ಆಯಾ ಸಂದರ್ಭಗಳಲ್ಲಿ ಸಂಘರ್ಷವಾಗಿದೆ. ರಾಮಾಂಜನೇಯರ ನಡುವೆಯೇ ಯುದ್ಧ ನಡೆದಿತ್ತು. ಅವರ ಮುಂದೆ ನಾವೆಲ್ಲ ಹುಲು ಮಾನವರು’ ಎಂದು ಹೇಳಿದರು.