‘ಕಾಂಗ್ರೆಸ್ನಲ್ಲಿ ನನಗೆ ಅವಮಾನವಾಗಿದೆ. ಕೂಡ್ಲಿಗಿಯಲ್ಲಿ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ. ಸದ್ಯದಲ್ಲೇ ಪಕ್ಷ ಸೇರುವೆ’ ಎಂದು ಗೋಪಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. 2013ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ನ ಎಸ್. ತಿಪ್ಪೇಸ್ವಾಮಿ ಎದುರು ಅವರು ಸೋತಿದ್ದರು. 2014ರಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ (ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರ) ಗೆದ್ದಿದ್ದರು.