‘ಕೋವಿಡ್, ಲಾಕ್ಡೌನ್, ಮಂಡಳಿಯ ಲೆಕ್ಕಪತ್ರಗಳ ನಿರ್ವಹಣೆ ಇತ್ಯಾದಿ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ. ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಾವೇ ಕೋರಿದ್ದೇವೆ. ಏಪ್ರಿಲ್ 15ರ ಒಳಗೆ ಚುನಾವಣಾ ವೇಳಾಪಟ್ಟಿಸಿದ್ಧಪಡಿಸಿ ಪ್ರಕಟಿಸುತ್ತೇವೆ. ಸದಸ್ಯರ ನೋಂದಣಿ, ಅವರಿಗೆ ಮತದಾನದ ಅರ್ಹತೆಗೆ ಬೇಕಾದ ಕಾಲಾವಕಾಶ ಸಂಬಂಧಿಸಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ. ಅವುಗಳನ್ನು ನಿವಾರಿಸಿ ಖಂಡಿತವಾಗಿಯೂ ಚುನಾವಣೆ ನಡೆಸುತ್ತೇವೆ’ ಎಂದು ಕಳೆದ ವಾರ ಎನ್.ಎಂ. ಸುರೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದರು.