ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಜೊತೆ ಮನಸ್ತಾಪ ಇರುವುದು ನಿಜ: ಧ್ರುವ ಸರ್ಜಾ

Published 6 ಅಕ್ಟೋಬರ್ 2023, 15:32 IST
Last Updated 6 ಅಕ್ಟೋಬರ್ 2023, 15:32 IST
ಅಕ್ಷರ ಗಾತ್ರ

ಬೆಂಗಳೂರು: ‘ದರ್ಶನ್‌ ಜೊತೆ ನನಗೆ ಮನಸ್ತಾಪವಿರುವುದು ನಿಜ. ಆದರೆ, ಅದನ್ನು ಬೆಳೆಸಿಕೊಂಡು ಹೋಗುವ ಅಗತ್ಯವಿಲ್ಲ’ ಎಂದು ನಟ ಧ್ರುವ ಸರ್ಜಾ ಹೇಳಿದರು. 

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ದರ್ಶನ್‌ ಅವರಿಗೆ ನನ್ನ ಬಳಿ ಎರಡು ಪ್ರಶ್ನೆಗಳಿವೆ. ವೈಯಕ್ತಿಕವಾಗಿ ಅವರನ್ನು ಭೇಟಿಯಾದಾಗ ಇದನ್ನು ಅವರ ಬಳಿಯೇ ಕೇಳಿ ಸ್ಪಷ್ಟೀಕರಣ ಪಡೆಯುತ್ತೇನೆ. ಅವರು ನನ್ನ ಪಾಲಿನ ಹಿರಿಯ ನಟ. ನಮ್ಮ ಚಿತ್ರಗಳನ್ನು ಬೆಂಬಲಿಸಿದ್ದಾರೆ. ಆ ಬಗ್ಗೆ ಗೌರವವಿದೆ’ ಎಂದರು.

ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಕಾವೇರಿ ನೀರು ಕುರಿತ ಅನ್ಯಾಯದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ದರ್ಶನ್‌ ಹಾಗೂ ಧ್ರುವ ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡಿರಲಿಲ್ಲ. ಆ ಬಗ್ಗೆ ಪ್ರತಿಕ್ರಿಯಿಸಿರುವ ಧ್ರುವ, ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಮಾಡಿಕೊಂಡು ಈ ಮನಸ್ತಾಪವನ್ನು ಬೆಳೆಸುವ ಅಗತ್ಯವಿಲ್ಲ ಎಂದೂ ಅವರು ಮನವಿ ಮಾಡಿದರು.

ಕಳೆದ ಮೂರು ವರ್ಷಗಳಿಂದ ಅಭಿಮಾನಿಗಳೊಂದಿಗೆ ಧ್ರುವ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಗುರುವಾರ ಮಧ್ಯರಾತ್ರಿಯಿಂದಲೇ ಅವರ ಜನ್ಮ ದಿನದ ಪ್ರಯುಕ್ತ ಮನೆ ಎದುರು ಅಭಿಮಾನಿಗಳು ಜಮಾಯಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT