ಬೆಂಗಳೂರು: ತೆಲುಗಿನ ಜನಪ್ರಿಯ ನಿರೂಪಕಿ ಹಾಗೂ ನಟಿ ಸುಮಾ ಅವರು ಪತ್ರಕರ್ತರ ಬಗ್ಗೆ ಆಡಿದ ಮಾತಿಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ವಿಡಿಯೊ ಮೂಲಕ ಪತ್ರಕರ್ತರಲ್ಲಿ ಸುಮಾ ಕ್ಷಮೆ ಕೋರಿದ್ದಾರೆ.
ಯುವ ನಟ ವೈಷ್ಣವ್ ತೇಜ್ ಹಾಗೂ ನಟಿ ಶ್ರೀಲೀಲಾ ನಟಿಸಿರುವ ‘ಆದಿಕೇಶವ’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಸುಮಾ ಅವರು, ಕಾರ್ಯಕ್ರಮ ತಡವಾಗುತ್ತಿರುವ ಬಗ್ಗೆ ಮಾತನಾಡುತ್ತಾ ಅವರು (ಪತ್ರಕರ್ತರು) ಸ್ನ್ಯಾಕ್ಸ್ ಅನ್ನು ಊಟದ ರೀತಿ ತಿನ್ನುತ್ತಿದ್ದಾರೆ, ಅವರು ತಿನ್ನುವುದು ಮುಗಿದ ಬಳಿಕ ಕಾರ್ಯಕ್ರಮ ಪ್ರಾರಂಭ ಮಾಡೋಣ ಎಂದು ಹೇಳಿದ್ದರು.
ಸುಮಾ ಮಾತಿಗೆ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸುಮಾ ಅವರು ತಮಾಷೆಯಾಗಿ ಹೇಳಿದ್ದು ಎಂದರು. ನಂತರ ವಿಡಿಯೊ ಮೂಲಕ ಅವರು ಪತ್ರಕರ್ತರಲ್ಲಿ ಕ್ಷಮೆ ಕೋರಿದ್ದಾರೆ.