ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 27 ಡಿಸೆಂಬರ್ 2019, 2:09 IST
ಅಕ್ಷರ ಗಾತ್ರ

ಅವನೇ ಶ್ರೀಮನ್ನಾರಾಯಣ
ಪುಷ್ಕರ್‌ ಫಿಲಂಸ್‌ ಹಾಗೂ ಶ್ರೀದೇವಿ ಎಂಟರ್‌ಟೈನರ್ಸ್‌ ಲಾಂಛನದಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಕೆ.ಹೆಚ್. ಪ್ರಕಾಶ್‌ ನಿರ್ಮಿಸಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತೆರೆ ಕಾಣುತ್ತಿದೆ.

ರಕ್ಷಿತ್‌ ಶೆಟ್ಟಿ ಹಾಗೂ ದಿ ಸೆವೆನ್‌ ಓಡ್ಸ್‌ ಚಿತ್ರಕ್ಕೆ ಕಥೆ ಬರೆದಿದ್ದು, ಸಚಿನ್ ರವಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಹಾಗೂ ಚರಣರಾಜ್ ಸಂಗೀತ ನೀಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವಿದೆ. ಕರಂ ಚಾವ್ಲಾ ಅವರ ಛಾಯಾಗ್ರಹಣವಿದೆ. ಸಚಿನ್ ಅವರ ಸಂಕಲನವಿದೆ. ವಿಕ್ರಂ ಮೋರ್ ಸಾಹಸ ನಿರ್ದೇಶಿಸಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಿದ್ದಾರೆ.

ರಕ್ಷಿತ್ ಶೆಟ್ಟಿ ನಾಯಕರಾಗಿದ್ದು, ಶಾನ್ವಿ ಶ್ರೀವಾತ್ಸವ್ ಅವರಿಗೆ ಜೋಡಿಯಾಗಿದ್ದಾರೆ. ಅಚ್ಯುತಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ರಘು ರಮಣಕೊಪ್ಪ, ವಿಜಯ್ ಚೆಂಡೂರ್‌ ತಾರಾಗಣದಲ್ಲಿದ್ದಾರೆ.

**
ಬಡ್ಡಿಮಗನ್ ಲೈಫು

ಗ್ರೀನ್‌ ಚಿಲ್ಲಿ ಎಂಟರ್‌ಟೈನ್‍ಮೆಂಟ್ಸ್ ಲಾಂಛನದಡಿ ಪವನ್ ಕುಮಾರ್ ನಿರ್ಮಾಣದ ‘ಬಡ್ಡಿಮಗನ್ ಲೈಫು’ ಚಿತ್ರ ಬಿಡುಗಡೆಯಾಗುತ್ತಿದೆ.

ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಿದೆ. ಪವನ್ -ಪ್ರಸಾದ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಲವಿತ್ ಅವರ ಛಾಯಾಗ್ರಹಣವಿದೆ. ಆಶಿಕ್ ಅರುಣ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಪವನ್‍ಕುಮಾರ್ ಅವರದ್ದು.

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್ ಬಡ್ಡಿ ಸೀನಪ್ಪನ ಬಳಿ ಸಾಲ ಮಾಡಿಕೊಂಡ ಭಾವಮೈದನನ್ನು ಉಳಿಸಲು ಜಾಮೀನು ಕೊಟ್ಟು ಸಂಕಟಕ್ಕೆ ಸಿಲುಕುವ ಭಾವನಾಳ ಕಥೆಯೇ ಇದರ ಹೂರಣ. ಬಲರಜವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ಪೂರ್ಣಚಂದ್ರ ತೇಜಸ್ವಿ, ಮಂಡ್ಯ ವನಿತಾ, ಪದ್ಮನಾಭ, ರಜನಿಕಾಂತ್, ಮೈಮ್ ರಮೇಶ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT