ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ನಿಶ್ವಲ್ ದಂಬೆಕೋಡಿ, ಮದನ್ ಬೆಳ್ಳಿಸಾಲು ಮತ್ತು ನಿತಿನ್ ಜಯ್ ರಚಿಸಿರುವ ಐದು ಹಾಡುಗಳಿಗೆ ರಘುದೀಕ್ಷಿತ್, ಸಂಜಿತ್ ಹೆಗಡೆ, ರಕ್ಷಿತಾ ರಾವ್, ದೀಪಕ್ ದೊಡೆದ, ಇಶಾಸುಬಿ, ಮೆಹಬೂಬ್ಸಾಬ್, ಅನನ್ಯಾ ಭಟ್ ಧ್ವನಿಯಾಗಿದ್ದಾರೆ. ‘ಪಿಆರ್ಕೆ ಸಂಸ್ಥೆಯ ಮೂಲಕ ಸಿಡಿ ಹೊರಬರುತ್ತಿರುವುದು ಸಂತಸ ತಂದಿದೆ’ ಎಂದರು ನಿರ್ದೇಶಕ ಎಸ್. ಅರ್ಜುನ್ಕುಮಾರ್.