‘ಎರಡನೇ ಸಲ’ ಚಿತ್ರದ ಪ್ರಚಾರಕ್ಕೆ ನಿರ್ದೇಶಕ ಗುರುಪ್ರಸಾದ್ ಬರುತ್ತಿಲ್ಲ ಎಂದು ಆರೋಪಿಸಿ ರಾಜ್ಯದಾದ್ಯಂತ ಶುಕ್ರವಾರದಿಂದ ಚಿತ್ರದ ಪ್ರದರ್ಶನಗಳನ್ನು ಸ್ಥಗಿತಗೊಳಿಸುವುದಾಗಿ ನಿರ್ಮಾಪಕ ಯೋಗೀಶ್ ನಾರಾಯಣ್ ಹೇಳಿದ್ದರು. ಅದಾದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ದೇಶಕ, ನಿರ್ಮಾಪಕರನ್ನು ಕರೆದು ರಾಜಿಯೂ ಮಾಡಿಸಲಾಗಿತ್ತು. ಮತ್ತೆ ಚಿತ್ರ ಪ್ರದರ್ಶನ ಮುಂದುವರಿಸುವುದಾಗಿ ನಿರ್ಮಾಪಕರೂ ಹೇಳಿದ್ದರು.