ಎರಡು ವರ್ಷಗಳ ಹಿಂದೆ ಕರ್ಣನ ಪಾತ್ರವನ್ನು ಮಾಡುತ್ತೀರಾ? ಎಂದು ಎಂ.ಟಿ ಸರ್ ನನ್ನಲ್ಲಿ ಕೇಳಿದ್ದರು. ಮಹಾಭಾರತ ಸಿನಿಮಾಗಾಗಿ ಶ್ರೀಕುಮಾರ್ ಅವರು ಕಳೆದ ನಾಲ್ಕು ವರ್ಷದಿಂದ ಪರಿಶ್ರಮ ಪಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಈ ನಡುವೆ ಎಂ.ಟಿ ಸರ್ ಮಹಾಭಾರತದ ಬಗ್ಗೆ ಮಾತನಾಡಿದ್ದಾರೆ. ನನ್ನ ಕಥಾಪಾತ್ರಕ್ಕೆ ಈ ಸಿನಿಮಾದಲ್ಲಿ ಪ್ರಾಧಾನ್ಯತೆ ಇರುವುದಾದರೆ ನಾನು ಅಭಿನಯಿಸುವೆ ಎಂದು ನಾನು ಒಪ್ಪಿದ್ದೇನೆ. ಈ ಪ್ರಾಜೆಕ್ಟ್ ಪ್ರಾಥಮಿಕ ಹಂತದಲ್ಲಿದೆ. ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ.