ದ್ರೌಪದಿ ಮತ್ತು ಲೇಖಕಿ ಕೃಷ್ಣಾ ಪಾತ್ರದಲ್ಲಿ ಸೀತಾ ಕೋಟೆ, ಶಿಖಂಡಿ ಮತ್ತು ಮೋ ಪಾತ್ರದಲ್ಲಿ ಚಂದ್ರಕೀರ್ತಿ ಅಭಿನಯಿಸಲಿದ್ದಾರೆ. ನಾಟಕಕ್ಕೆ ಕಾರ್ತಿಕ್ ಹೆಬ್ಬಾರ್ ಅವರ ನಿರ್ದೇಶನವಿದೆ. ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಹೆಣ್ಣಿನ ಬದುಕಿನ ಹೋರಾಟದ ಸೋಲು– ಗೆಲುವುಗಳನ್ನು ಅವಲೋಕಿಸುವ ನಾಟಕ ಮನುಷ್ಯತ್ವವನ್ನು ಕಾಡುವ ಮೂಲ ಪ್ರಶ್ನೆಗಳಿಗೆ ಕರೆದೊಯ್ಯುತ್ತದೆ. ನಿತ್ಯಜೀವನದಲ್ಲಿ ಹಾಸುಹೊಕ್ಕಿರುವ ಪಾತ್ರಗಳೇ ರಂಗದ ಮೇಲೆ ಅನಾವರಣಗೊಳ್ಳುತ್ತವೆ.