‘ಸ್ಟಾರ್ ಸುವರ್ಣ’ ವಾಹಿನಿಯ ಎಲ್ಲ ಕಲಾವಿದರು ಮಂಡ್ಯದಲ್ಲಿ ಸುವರ್ಣ ಸಂಕ್ರಾಂತಿಯನ್ನು ಈಚೆಗೆ ಆಚರಿಸಿದ್ದಾರಂತೆ. ‘ಸತ್ಯಂ ಶಿವಂ ಸುಂದರಂ’ ಧಾರವಾಹಿಯ ಶಿವ ಮತ್ತು ಇಷ್ಟ, ‘ಬಿಳಿ ಹೆಂಡ್ತಿ’ಯ ಶೆರ್ಲಿ ಮತ್ತು ಅಜಿತ್, ‘ಮುದ್ದುಲಕ್ಷ್ಮಿ’ಯ ಲಕ್ಷ್ಮಿ ಮತ್ತು ದೃಮಂತ್, ‘ಸರ್ವ ಮಂಗಳ ಮಾಂಗಲ್ಯೆ’ಯ ಶಂಕರ ಮತ್ತು ಪಾರು, ‘ಕೃಷ್ಣ ತುಳಸಿ’ಯ ಕೃಷ್ಣ ಮತ್ತು ತುಳಸಿ, ‘ಮೌನರಾಗ’ದ ಅಂಕಿತ್ ಮತ್ತು ರಾಗ, ‘ಅಮೃತವರ್ಷಿಣಿ’ಯ ವರ್ಷ ಮತ್ತು ರಾಘವ, ‘ಮಹಾರಾಣಿ’ಯ ಇಶಾ, ವರುಣ್, ಅವನಿ ಇದರಲ್ಲಿ ಪಾಲ್ಗೊಂಡಿದ್ದ ಪ್ರಮುಖರು.