ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ ಜೋಡಿಗಳ ಸುವರ್ಣ ಸಂಕ್ರಾಂತಿ

Last Updated 17 ಜನವರಿ 2019, 19:45 IST
ಅಕ್ಷರ ಗಾತ್ರ

‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಮತ್ತು ಒಳ್ಳೆಯ ಕಾರ್ಯಕ್ರಮ ನೋಡಿ’. ಇದು ಕಿರುತೆರೆ ವೀಕ್ಷಕರಿಗೆ ‘ಸ್ಟಾರ್ ಸುವರ್ಣ’ ವಾಹಿನಿ ನೀಡುತ್ತಿರುವ ಸಲಹೆ!

‘ಸ್ಟಾರ್ ಸುವರ್ಣ’ ವಾಹಿನಿಯ ಎಲ್ಲ ಕಲಾವಿದರು ಮಂಡ್ಯದಲ್ಲಿ ಸುವರ್ಣ ಸಂಕ್ರಾಂತಿಯನ್ನು ಈಚೆಗೆ ಆಚರಿಸಿದ್ದಾರಂತೆ. ‘ಸತ್ಯಂ ಶಿವಂ ಸುಂದರಂ’ ಧಾರವಾಹಿಯ ಶಿವ ಮತ್ತು ಇಷ್ಟ, ‘ಬಿಳಿ ಹೆಂಡ್ತಿ’ಯ ಶೆರ್ಲಿ ಮತ್ತು ಅಜಿತ್, ‘ಮುದ್ದುಲಕ್ಷ್ಮಿ’ಯ ಲಕ್ಷ್ಮಿ ಮತ್ತು ದೃಮಂತ್, ‘ಸರ್ವ ಮಂಗಳ ಮಾಂಗಲ್ಯೆ’ಯ ಶಂಕರ ಮತ್ತು ಪಾರು, ‘ಕೃಷ್ಣ ತುಳಸಿ’ಯ ಕೃಷ್ಣ ಮತ್ತು ತುಳಸಿ, ‘ಮೌನರಾಗ’ದ ಅಂಕಿತ್ ಮತ್ತು ರಾಗ, ‘ಅಮೃತವರ್ಷಿಣಿ’ಯ ವರ್ಷ ಮತ್ತು ರಾಘವ, ‘ಮಹಾರಾಣಿ’ಯ ಇಶಾ, ವರುಣ್, ಅವನಿ ಇದರಲ್ಲಿ ಪಾಲ್ಗೊಂಡಿದ್ದ ಪ್ರಮುಖರು.

ಇವರು ಮಾತ್ರವಲ್ಲದೆ ರಿಚರ್ಡ್ ಲೂಯಿಸ್ ಅವರ ಹಾಸ್ಯ, ಸಿಂಚನ್ ದೀಕ್ಷಿತ್ ಅವರ ಗಾಯನ ಕೂಡ ಕಾರ್ಯಕ್ರಮದ ಭಾಗವಾಗಿತ್ತು. ‘ಕಿಸ್’ ಮತ್ತು ‘ಪಂಚತಂತ್ರ’ ಸಿನಿಮಾಗಳ ಕಲಾವಿದರು ಕೂಡ ಬಂದಿದ್ದರು ಎಂದು ವಾಹಿನಿ ಹೇಳಿದೆ.

ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ತಾರಾ, ‘ಮುಖ್ಯಮಂತ್ರಿ’ ಚಂದ್ರು, ಸಿಹಿಕಹಿ ಚಂದ್ರು, ನೀನಾಸಂ ಸತೀಶ್, ಜೈಜಗದೀಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರು ಯಶಸ್ವಿ ದಾಂಪತ್ಯದ ಗುಟ್ಟನ್ನು ಬಿಚ್ಚಿಟ್ಟರು. ಇಷ್ಟೆಲ್ಲಕ್ಕೂ ಸಾಕ್ಷಿಯಾದ ಈ ಕಾರ್ಯಕ್ರಮ ‘ಸ್ಟಾರ್ ಸುವರ್ಣ’ದಲ್ಲಿ ಭಾನುವಾರ (ಜನವರಿ 20) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT