ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ದೊರೆಯುತ್ತದೆ
Published 27 ಜನವರಿ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗೆ ಅನುಮಾನ ಬೇಡ. ದೃಢನಿರ್ಧಾರದೊಂದಿಗೆ ಮುನ್ನಡೆಯಿರಿ.ನಿಮ್ಮ ಧನಾದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ಕೆಲಸ ಕಾರ್ಯಗಳನ್ನು ಮಾಡಲು ಆಲಸಿತನ ಕಾಡಿದರು ಒತ್ತಾಯ ಪೂರಕವಾಗಿ ಮಾಡುವಿರಿ. ಕೃಷಿಕರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ, ಉತ್ತಮ ಬೆಲೆ ಸಿಗುವ ಸಂದರ್ಭ ವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆತು ಉತ್ತಮ ಫಲಿತಾಂಶ ಬರುತ್ತದೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈಗ ಸೂಕ್ತ ಚಿಕಿತ್ಸೆ ದೊರೆಯುವ ಸಂದರ್ಭವಿದೆ.ಸಂಗಾತಿಗೆ ತವರು ಮನೆಯಿಂದ ಸಹಾಯ ದೊರಕುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬರಬಹುದು. ಹಿರಿಯರ ಆಸ್ತಿಯಲ್ಲಿಪಾಲು ದೊರೆಯುತ್ತದೆ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಇರುತ್ತದೆ.
ವೃಷಭ
ಕಲಾವಿದರುಗಳಿಗೆ ಸ್ವಲ್ಪ ಬೇಡಿಕೆ ಕಡಿಮೆಯಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆಗಳಿಂದ ಹೆಸರು ಗಳಿಸುವಿರಿ. ಕೃಷಿ ಮಾಡುವವರಿಗೆ ಉತ್ತಮ ಪ್ರೋತ್ಸಾಹ ಸಹಾಯಧನ ಗಳು ದೊರೆಯುತ್ತವೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಧರ್ಮ ವಿದ್ಯೆಯನ್ನು ಕಲಿಯು ತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕೆಲ ವರಿಗೆ ತಕ್ಷಣ ಪರಿಹಾರ ದೊರೆಯುವ ಸಾಧ್ಯತೆ ಇದೆ. ಪ್ರೀತಿ ಪ್ರೇಮಗಳಲ್ಲಿ ಇರುವವರಿಗೆ ಯಶಸ್ಸು ಸಿಗುತ್ತದೆ ಹಾಗೂ ಹಿರಿಯರಒಪ್ಪಿಗೆ ಸಹಸಿಗುತ್ತದೆ. ವಿದೇಶಿವ್ಯವ ಹಾರ ಮಾಡುವವರಿಗೆ ಆದಾಯಹೆಚ್ಚುತ್ತದೆ.ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.
ಮಿಥುನ
ಆಲಸೀತನ ಮನೆ ಮಾಡಿದ್ದರು ಸಹ ಬಲವಂತವಾಗಿ ಕಾರ್ಯಯೋನ್ಮುಖರಾಗುವಿರಿ. ನಿಮ್ಮ ಕೆಲಸ ಕಾರ್ಯಗಳಿಂದ ಧನಸಂಪಾದನೆ ಮಾಡುವ ಯೋಗ ಖಂಡಿತ ಇದೆ. ಹೆಚ್ಚು ಚಟುವಟಿಕೆಯಿಂದ ಕೆಲಸಮಾಡುವಿರಿ. ಕೃಷಿ ವಿಸ್ತರಣೆಯನ್ನು ಮಾಡಬಹುದು. ಮಠಾಧೀಶರುಗಳು ತಮ್ಮ ಹೊಸ ಮಠಗಳನ್ನು ಸ್ಥಾಪನೆ ಮಾಡ ಬಹುದು. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಹರಿತವಾದ ಆಯುಧಗಳನ್ನು ಬಳಸು ವಾಗ ಸಂಗಾತಿಯು ಎಚ್ಚರವಹಿಸಬೇಕು.ಸಂಗಾತಿಯು ಮಾಡುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವಿದೇಶದಲ್ಲಿ ಉದ್ಯೋಗದಲ್ಲಿರುವವ ರಿಗೆ ಹೆಚ್ಚಿನ ಅಭಿವೃದ್ಧಿ ಇರು ತ್ತದೆ. ಧಾರ್ಮಿಕ ಕಾರ್ಯ ಗಳಿಗಾಗಿ ಮತ್ತು ಹಿರಿಯರ ಸೌಲಭ್ಯಕ್ಕಾಗಿ ಹೆಚ್ಚು ಹಣ ಖರ್ಚುಮಾಡುವಿರಿ. ಸರ್ಕಾರಿ ದಾಖಲೆಗಳ ತಿದ್ದುಪಡಿ ಸಹ ನಿಧಾನವಾಗುವ ಸಾಧ್ಯತೆಗಳಿವೆ.
ಕರ್ಕಾಟಕ
ಮನಸ್ಸಿನಲ್ಲಿ ಉಲ್ಲಾಸವಿರುತ್ತದೆ. ಧನದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇದ್ದೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿನ ಉತ್ಸಾಹ ಕಡಿಮೆಯಾದಂತೆ ಕಾಣುತ್ತದೆ. ಸಂಗಾತಿಯಿಂದ ಸಂಸಾರದಲ್ಲಿ ಕಾವೇರಿದ ಮಾತುಗಳಾಗುತ್ತವೆ. ಸಂಗಾತಿ ಮಾಡುವ ಖರ್ಚು ಸ್ವಲ್ಪ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಕಡಿಮೆಮಟ್ಟದ ಫಲಿತಾಂಶವಿರುತ್ತದೆ. ಖರ್ಚನ್ನುನೀವು ನಿಯಂತ್ರಣ ಮಾಡದಿದ್ದಲ್ಲಿ ಸಾಲ ಮಾಡಬೇಕಾದ ಸಂದರ್ಭ ಬರಬಹುದು. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿಆಗುತ್ತದೆ. ಸಂಗಾತಿಗೆಉತ್ತಮಉದ್ಯೋಗ ಅಥವಾ ಸರ್ಕಾರಿ ಗುತ್ತಿಗೆಗಳು ದೊರೆಯಬಹುದು. ಕೆಲವು ರಾಜಕೀಯ ವ್ಯಕ್ತಿಗಳಿಗೆ ತಮ್ಮದೇ ಆದ ತಪ್ಪು ಗಳಿಂದ ಶಿಕ್ಷೆ ಅನುಭವಿಸ ಬೇಕಾಗಬಹುದು. ಮಹಿಳೆ ಯರ ಮುಕಾಲಂಕಾರವನ್ನು ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಗಣಿ ಉದ್ಯಮವನ್ನು ನಡೆಸುವ ವರೆಗೆ ಸ್ವಲ್ಪ ಹಿನ್ನಡೆ ಇರುತ್ತದೆ.
ಸಿಂಹ
ನಿಮ್ಮ ನಿರೀಕ್ಷೆಯಂತೆ ಕೆಲವು ಕೆಲಸಗಳು ನಡೆದು ಮನಸ್ಸಿಗೆ ಆನಂದವಾಗುತ್ತದೆ. ಧನದಾಯವು ಕಡಿಮೆ ಇದ್ದು ಅದರಲ್ಲೇ ತೂಗಿಸಲು ಪ್ರಯತ್ನಿಸುವಿರಿ. ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಹಣಗಳಿಸುವ ಇರಾದೆ ಇರುತ್ತದೆ. ನಿಮ್ಮ ಸೋದರಿಯರಿಂದ ಉತ್ತಮ ಸಹ ಕಾರ ದೊರೆಯುತ್ತದೆ. ಕೃಷಿಭೂಮಿಗಳನ್ನು ಹೆಚ್ಚು ಅಭಿ ವೃದ್ಧಿ ಪಡಿಸುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ತಲೆಗೆ ಪೆಟ್ಟು ಬೀಳುವ ಸಾಧ್ಯತೆಗ ಳಿವೆ, ಎಚ್ಚರ ವಹಿಸಿರಿ. ಕೆಲವು ಹಿರಿಯರು ನಿಮ್ಮ ಕಾರ್ಯಕ್ಕೆ ಸಹಾಯ ಮಾಡುವರು. ವಾಹನಮಾರಾಟಗಾರರಿಗೆ ವ್ಯವಹಾರದಲ್ಲಿ ಮಂದಗತಿ ಇರುತ್ತದೆ. ರಫ್ತು ವ್ಯವಹಾರಗಳಲ್ಲಿ ಸ್ವಲ್ಪ ಅಡ್ಡಿ ಆತಂಕಗಳು ತಲೆದೋರ ಬಹುದು. ವ್ಯಾಪಾರ ವ್ಯವಹಾರಗಳಲ್ಲಿಜಾಣತನದಿಂದ ಲಾಭಪಡೆಯುವಿರಿ. ತಾಯಿಕೋಪಕ್ಕೆ ಗುರಿಯಾಗುವ ಲಕ್ಷಣಗಳಿವೆ. ಕೀಲುಗಳಿಗೆ ಸಂಬಂಧಪಟ್ಟ ತೊಂದರೆ ಗಳು ತೊಂದರೆಗಳು ಕಾಡಬಹುದು.
ಕನ್ಯಾ
ಯಾವ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ನಿರೀಕ್ಷೆ ಇಟ್ಟಿದ್ದ ಕೆಲಸವೊಂದು ಆಗದೆ ಮನಸ್ಸಿಗೆ ಸ್ವಲ್ಪ ಬೇಸರವಾಗುತ್ತದೆ. ಧನಾದಾಯವು ಸ್ವಲ್ಪ ಚೇತರಿಕೆ ಯನ್ನು ಕಾಣುತ್ತದೆ. ಕೆಲವುಬಂಧುಗಳ ಸಹಕಾರಗಳು ನಿಮಗೆ ದೊರೆತರೂ ಕೆಲವು ಬಂಧುಗಳು ನಿಮ್ಮ ಕೆಲಸ ಕಾರ್ಯಕ್ಕೆ ಅಡ್ಡಿಪಡಿಸುವರು. ಆಸ್ತಿ ಖರೀದಿಗೆ ನಾನಾ ತಂತ್ರಗಳನ್ನು ಬಳಸುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುತ್ತದೆ. ಕೃಷಿಯನ್ನು ಮಾಡಲು ಸಾಕಷ್ಟು ಉತ್ಸಾಹ ತೋರುವಿರಿ. ಮುಖಂಡತ್ವ ವಹಿಸಲು ಸಿದ್ಧತೆ ನಡೆಸಿದ್ದ ನಿಮಗೆ ನಿಮ್ಮಮಾತಿನಿಂದ ಸ್ಥಾನ ವಂಚನೆ ಯಾಗುವ ಸಂದರ್ಭವಿದೆ. ವಿವಾಹಿತರು ವಿದೇಶದಲ್ಲಿ ರುವ ಅವರ ಬಾಳ ಸಂಗಾತಿಯನ್ನು ಈಗ ಹೋಗಿ ಸೇರಿಕೊಳ್ಳಬಹುದು. ಹೈನುಗಾರಿಕೆ ಮಾಡುವವರಿಗೆ ಲಾಭವಿದೆ. ಹಾಲಿನಉತ್ಪನ್ನಗಳನ್ನು ಮಾರಾಟಮಾಡು ವವರಿಗೆ ಹೆಚ್ಚಿನ ಲಾಭವಿರುತ್ತದೆ. ಸ್ವಂತ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ.
ತುಲಾ
ನೀವು ಶ್ರೇಷ್ಠನೆಂಬ ಮನೋಭಾವ ನಿಮ್ಮಲ್ಲಿ ಬೆಳೆದಿರುತ್ತದೆ. ಮಾತಿನಲ್ಲಿ ಸ್ವಲ್ಪ ಕಠಿಣತೆ ಇರುತ್ತದೆ. ನಿಮ್ಮ ನಡವಳಿಕೆಯಲ್ಲಿ ಧನ ಸಂಪಾದನೆ ಅತಿಮುಖ್ಯವಾಗಿರುತ್ತದೆ. ಸರ್ಕಾರಿ ಆಸ್ತಿಮಾಡಿಕೊಳ್ಳಲು ಪ್ರಯತ್ನ ಪಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಮಕ್ಕಳಿಂದ ಸೂಕ್ತ ಗೌರವ ದೊರೆಯದಿರಬಹುದು. ಮೂಳೆ ತೊಂದರೆ ಇರುವವರಿಗೆ ಯಾತನೆ ಜಾಸ್ತಿಯಾಗಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ನಷ್ಟ ಉಂಟಾಗುವುದರ ಜೊತೆಗೆ ವ್ಯವಹಾರದಲ್ಲೂ ಹಿನ್ನಡೆಯಾಗಬಹುದು. ಸಂಗಾತಿ ಕಡೆಯಿಂದ ಸ್ವಲ್ಪ ಧನಸಹಾಯವನ್ನು ಪಡೆಯಬಹುದು. ಸಿದ್ಧ ಉಡುಪನ್ನು ತಯಾರಿಸುವವರಿಗೆ ಅನಿರೀಕ್ಷಿತಲಾಭ ಬರುವಸಾಧ್ಯತೆ ಇದೆ. ಹಿರಿಯರ ವ್ಯಾಪಾರ ವ್ಯವಹಾರಗಳು ನಿಮಗೆ ವರ್ಗಾಯಿಸಲ್ಪಡಬಹುದು. ಉದ್ಯೋಗದಲ್ಲಿ ಏರಿಳಿತ ಇರುವುದಿಲ್ಲ. ಸರ್ಕಾರಿ ಕಚೇರಿಯಲ್ಲಿ ಕೆಲಸಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ.
ವೃಶ್ಚಿಕ
ಶಿಸ್ತು ಬದ್ಧ ವ್ಯಕ್ತಿಯಾಗಿ ಇರುವಿರಿ. ನಿಮ್ಮ ರೀತಿ ರಿವಾಜುಗಳಲ್ಲಿ ಸಾಕಷ್ಟು ಶಿಸ್ತು ಇರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಆದರೆ ಖರ್ಚಿನ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಅಗತ್ಯ. ಹಿರಿಯರ ಸಹಕಾರಗಳು ನಿಮಗೆ ದೊರೆಯುತ್ತವೆ. ಕೃಷಿ ಮಾಡುವುದರಲ್ಲಿ ಹೆಚ್ಚು ಸಂತೋಷವನ್ನು ಕಾಣುವಿರಿ. ವಾಹನಗಳನ್ನ ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ ಹಾಗೂ ಸಂಪಾದನೆ ಹೆಚ್ಚುತ್ತದೆ. ವಾಹನಗಳ ಬಿಡಿಭಾಗಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಲಾಭವಿರುವುದಿಲ್ಲ. ಸಂಗಾತಿಯ ಆದಾಯ ಕೂಡ ಹೆಚ್ಚುತ್ತದೆ. ಸಂಗಾತಿಗಾಗಿ ಖರ್ಚು ಮಾಡಬೇಕಾದ ಸಂದರ್ಭ ಬರಬಹುದು. ಲೋಹಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗು ತ್ತದೆ. ಹೈನುಗಾರಿಕೆಮಾಡುವವರಿಗೆ ಆದಾಯದಲ್ಲಿ ಸ್ವಲ್ಪ ಕಡಿಮೆಯಾಗಬಹುದು.
ಧನು
ವಾರದ ಆರಂಭದಲ್ಲಿ ಬಹಳ ಉತ್ಸಾಹವಿರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಉತ್ತಮ ಮಾತನಾಡಿ ಜನರನ್ನುಗೆಲ್ಲುವಿರಿ. ಸರ್ಕಾರದಲ್ಲಿ ಸಲಹೆ ಗಾರರಾಗಿರುವವರಿಗೆ ಸ್ಥಾನ ಹೆಚ್ಚುತ್ತದೆ. ಗೂಢಚಾರರಾಗಿ ಕೆಲಸ ಮಾಡುತ್ತಿರುವವರಿಗೆ ಮುಖ್ಯವಾದ ಅಪ ರಾಧೀ ಕೆಸೊಂದನ್ನು ಕಂಡುಹಿಡಿಯುವ ಕೀರ್ತಿಗೆಪಾತ್ರ ರಾಗುವ ಅವಕಾಶವಿದೆ. ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ. ಆಸ್ತಿವಿಚಾರಗಳಲ್ಲಿ ಮುಂದುವರೆಯಲು ಈಗ ಸಕಾಲ ಅಲ್ಲ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗುವ ಕಾಲ. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಪ್ರಸೂತಿ ತಜ್ಞರಿಗೆ ಬೇಡಿಕೆ ಬರುತ್ತದೆ. ಸಂಗಾತಿಯ ಜೊತೆ ಕೂಡಿ ಮಾಡಿದ ವ್ಯವ ಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ. ತಾಯಿಯಿಂದ ನಿರೀಕ್ಷಿತ ಸಮಯದಲ್ಲಿ ಸೂಕ್ತಸಹಕಾರ ದೊರೆಯು ತ್ತದೆ. ತಂದೆಯಿಂದ ಭೂಮಿ ಅಥವಾ ಆಸ್ತಿ ದೊರೆ ಯುವ ಸಾಧ್ಯತೆ ಇದೆ.
ಮಕರ
ಯಾವುದೇ ರೀತಿಯ ಒತ್ತಡವಿದ್ದರೂ ಸಹ ಶ್ರದ್ಧೆಯಿಂದ ಕೆಲಸ ಮಾಡಿ ಮುಗಿಸುವಿರಿ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ಆಮದು ಮತ್ತು ರಫ್ತು ವ್ಯವಹಾರಗಳನ್ನು ಮಾಡುವವರಿಗೆ ಆದಾಯ ಹೆಚ್ಚು ತ್ತದೆ. ವಿದೇಶಿಯ ಹಣ ವರ್ಗಾವಣೆ ಮಾಡುವ ಕೆಲಸ ಮಾಡುವವರಿಗೆ ಆದಾಯವಿರುತ್ತದೆ. ಹಿರಿಯರ ಬೆಂಬಲ ನಿಮಗೆ ಸದಾಕಾಲ ದೊರೆಯುತ್ತದೆ. ಸಂಸಾರ ದಲ್ಲಿ ಒಂದು ರೀತಿಯ ನೆಮ್ಮದಿ ಇರುತ್ತದೆ. ಕೆಲವು ರಾಜಕೀಯ ನಾಯಕರುಗಳು ನಿಮ್ಮ ಸಹಾಯಕ್ಕೆ ಬರುವರು. ಕೃಷಿಕರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುತ್ತದೆ. ಕೃಷಿ ಯಂತ್ರೋಪ ಕರಣಗಳನ್ನು ತಯಾರಿಸುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಸರ್ಕಾರಿ ಕೆಲಸಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ನಿಮಗೆ ನಿಮ್ಮ ಪಾಲಿನ ಲಾಭ ದೊರೆಯುತ್ತದೆ.
ಕುಂಭ
ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಿರ ಮನಸ್ಸಿನಿಂದ ಕೆಲಸ ಮಾಡುವುದು ಬಹಳ ಉತ್ತಮ. ಧನದಾಯವು ಮಂದಗತಿಯಲ್ಲಿದ್ದರೂ ಸಹ ತೊಂದರೆ ಏನು ಆಗುವುದಿಲ್ಲ ಆದರೆ ಖರ್ಚಿನ ಬಗ್ಗೆ ಗಮನ ಇರಲಿ. ವಿದೇಶಗಳಲ್ಲಿ ದುಡಿಯುತ್ತಿರುವವರಿಗೆ ಆದಾಯ ಹೆಚ್ಚುತ್ತದೆ. ಸಮೂಹದಲ್ಲಿ ನೀವು ಮಾತನಾಡುವಾಗ ಎಚ್ಚರವಿರಲಿ. ಹಿರಿಯರಿಂದ ಸಾಕಷ್ಟು ಸಲಹೆಗಳು ಹರಿದು ಬರುತ್ತವೆ. ಆಸ್ತಿ ಖರೀದಿ ವಿಚಾರ ಗಳಲ್ಲಿ ಮುಂದುವರೆಯಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶ ಇರುತ್ತದೆ. ಪ್ರೇಮಿಗಳು ಅವರ ಸಂಗಾತಿಗಾಗಿ ದುಬಾರಿ ಬೆಲೆಯಕಾಣಿಕೆಗಳನ್ನು ಕೊಡಬೇಕಾಗಬಹುದು. ಯುವಕರಿಗೆ ಧರ್ಮ ಶ್ರದ್ಧೆ ಕಡಿಮೆಯಾಗಬಹುದು. ಗುರುತಿನವರಿಂದ ವೃತ್ತಿಯಲ್ಲಿ ಅನುಕೂಲವಾಗತ್ತದೆ. ಕೆಲವರ ಅತಿಬುದ್ಧಿವಂತಿಕೆ ಅವರ ಕೆಲಸಕ್ಕೆ ಸಂಚಕಾರ ತರಬಹುದು. ಸರ್ಕಾರಿ ಕೆಲಸಕಾರ್ಯಗಳಲ್ಲಿವೇಗವನ್ನು ಕಾಣಬಹುದು.
ಮೀನ
ಬಹಳಷ್ಟು ವಿಷಯಗಳಿಗೆ ಕೋಪ ಮಾಡಿಕೊಳ್ಳುವಿರಿ, ಇದರಿಂದ ನಿಮಗೆ ಹಾನಿ. ಧನದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ಒಂದು ರೀತಿಯ ಗತ್ತು ಇರುತ್ತದೆ. ಆಸ್ತಿ ವಿಚಾರಗಳಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆ ಕಡಿಮೆಯಾಗ ಬಹುದು. ಶೀತ ಬಾಧೆ ಇರುವವರು ಸಾಕಷ್ಟು ಎಚ್ಚರ ವಹಿಸಲೇಬೇಕು. ಸಂಗಾತಿಯಿಂದ ಬರುವ ಧನಸಹಾ ಯಗಳು ನಿಲ್ಲುವ ಸಾಧ್ಯತೆಗಳಿವೆ. ಸೈನಿಕರಿಗೆ ಬೇಕಾದ ಸೂಕ್ತ ಸವಲತ್ತುಗಳು ದೊರೆಯುತ್ತವೆ. ಕಬ್ಬಿಣದ ಮಾರಾಟಗಾರರಿಗೆ ಲಾಭ ಕಡಿಮೆಯಾಗಬಹುದು. ಹೈನುಗಾರಿಕೆ ಮಾಡುವವರಿಗೆ ಆದಾಯದಲ್ಲಿ ವ್ಯತ್ಯಾಸ ವಾಗಬಹುದು. ಹಿರಿಯರ ವ್ಯವಹಾರಗಳಲ್ಲಿ ನಿಮಗೂ ಪಾಲು ದೊರೆಯುತ್ತದೆ. ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಮಾನವ ಸಂಪನ್ಮೂಲವನ್ನು ಒದಗಿಸುವವರಿಗೆ ಹೆಚ್ಚುಆದಾಯ ಇರುತ್ತದೆ.