ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಮೇಲಧಿಕಾರಿಗಳ ಜತೆ ಮಿತ್ರತ್ವವನ್ನು ಕಾಪಾಡಿ
Published 9 ಜೂನ್ 2024, 23:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಆಭಿವೃದ್ಧಿಯನ್ನು ಎದುರು ನೋಡಬಹುದು. ರಾಜಕೀಯ ವಲಯದ ಕಾರ್ಯಕರ್ತರಿಗೆ ಅರಿವಿಗೆ ಬರದಂತೆ ಮುನ್ನಡೆಯುವ ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ.
ವೃಷಭ
ಇಂದಿನ ಭಾಷಣದ ವೇಳೆ ಮಾತಿನ ಘನತೆ ಹೆಚ್ಚುತ್ತದೆ. ದೇಹದಲ್ಲಿ ವಾತ ಅಧಿಕವಾಗಿ ಕೈ-ಕಾಲು ನೋವು ಕಾಣಿಸಿಕೊಳ್ಳಬಹುದು. ಪಿತ್ರಾರ್ಜಿತ ಆಸ್ತಿ ಸಿಗುವುದು.
ಮಿಥುನ
ಒಡಹುಟ್ಟಿದವರ ಸಮಸ್ಯೆಗೆ ನಿಮ್ಮಿಂದಾಗುವ ಉಪಕಾರವನ್ನು ಮಾಡುವ ಪ್ರಯತ್ನಮಾಡಿ.ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವೆನಿಸುವುದು. ಪೀಠೋಪಕರಣಗಳ ಖರೀದಿಗೆ ಶುಭ ದಿನ.
ಕರ್ಕಾಟಕ
ಮೇಲಧಿಕಾರಿಗಳ ಜತೆ ಮಿತ್ರತ್ವವನ್ನು ಕಾಪಾಡಿ. ಇಲ್ಲವಾದಲ್ಲಿ ಪಶ್ಚಾತ್ತಾಪ ಪಡಬೇಕಾಗುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತವೆ.
ಸಿಂಹ
ಮಹಾಗಣಪತಿಯ ಆರಾಧನೆಯಿಂದ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ದೂರಾಗುವುವು. ವಿದ್ಯಾಭ್ಯಾಸದ ಸಮಯದಲ್ಲಿ ನೀವಂದುಕೊಂಡ ಹರಕೆಗಳನ್ನು ಪೂರೈಸುವ ಬಗ್ಗೆ ಯೋಚಿಸಿ.
ಕನ್ಯಾ
ಹೊರದೇಶದ ಉದ್ಯೋಗ ಅನ್ವೇಷಣೆಯಲ್ಲಿ ಇರುವವರಿಗೆ ಹಾಗೂ ಉನ್ನತ ವಿದ್ಯಾಭ್ಯಾಸ ಬಯಸುವವರಿಗೆ ಒಳ್ಳೆಯ ದಿನ. ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರಿ ಉನ್ನತ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ತುಲಾ
ಕುಟುಂಬ ನಿರ್ವಹಣೆಗಾಗಿ ಅಧಿಕ ಮಟ್ಟಿನ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಸಂತಸದ ವಿಚಾರವನ್ನು ಸ್ವೀಕರಿಸಲು ಕಷ್ಟವಾಗುವುದು.
ವೃಶ್ಚಿಕ
ಪ್ರಾಪ್ತ ವಯಸ್ಸಿನ ಮಗಳಿಗೆ ಸಂಬಂಧಿಕರಲ್ಲಿ ಅಥವಾ ಅಕ್ಕ-ಪಕ್ಕದ ಮನೆಯಲ್ಲಿಯೇ ವರ ನಿಶ್ಚಯವಾಗಿ ಮದುವೆಯ ತಯಾರಿ ನಡೆಸುವಿರಿ. ಪ್ರಾಮಾಣಿಕತೆಗೆ ತಕ್ಕ ಫಲವನ್ನು ಪಡೆಯುತ್ತೀರಿ.
ಧನು
ಉಂಟಾಗುತ್ತಿರುವ ದೈಹಿಕ ಬದಲಾವಣೆಗಳು ಔಷಧದ ಅಡ್ಡಪರಿಣಾಮಗಳೇ ಎಂದು ಪರೀಕ್ಷಿಸಿಕೊಳ್ಳಿರಿ. ಕೆಲವು ಆಲೋಚನಾರಹಿತ ಮಾತುಗಳಿಂದಾಗಿ ಆಭಾಸಕ್ಕೆ ಒಳಗಾಗಬಹುದು.
ಮಕರ
ಸ್ವಲ್ಪ ದಿನದ ಹಿಂದೆ ಪರಿಹಾರ ಕಾಣದೆ ಕಾಡುತ್ತಿದ್ದ ಒಂದು ಸಮಸ್ಯೆ ಹಿಮದಂತೆ ಕರಗಿಹೋಗುತ್ತದೆ. ಸಹಾಯಕ ವರ್ಗದವರ ಕಷ್ಟಗಳಿಗೆ ನೆರವಾಗುವ ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ.
ಕುಂಭ
ಹೊಸ ಹೊಸ ವಿಷಯದ ಅಧ್ಯಯನದಲ್ಲಿ ತೋರಿಸುವ ಆಸಕ್ತಿಯನ್ನು ಹುರಿದುಂಬಿಸಲು ಅನುಕೂಲಕರವಾಗುವ ರೀತಿಯಲ್ಲಿ ಸುತ್ತಲಿನ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಿ. ಸಂಧಿವಾತ ಕಾಡಬಹುದು.
ಮೀನ
ವ್ಯವಸಾಯದಲ್ಲಿ ಎದುರಾಗುವ ವಿಪತ್ತನ್ನು ನಿಭಾಯಿಸಲು ಬೇಕಾದ ತಯಾರಿ ಮಾಡಿಟ್ಟುಕೊಳ್ಳಿರಿ. ಕಾರ್ಯವೈಖರಿಯನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಂಡಲ್ಲಿ ಕೆಲಸವು ಇನ್ನಷ್ಟು ಸುಲಭವಾಗುವುದು.