ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಾಲ ಕೊಡುವಾಗ ಎಚ್ಚರಿಕೆ ವಹಿಸಬೇಕು
Published 18 ಮಾರ್ಚ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ : ಬಹಳ ಬೇಗ ಗುರಿ ತಲುಪಬೇಕು ಎಂಬ ಹಂಬಲ, ಆತುರ ಕೆಲಸಕ್ಕೆ ಅಡ್ಡಿ ಮಾಡಬಹುದು. ಸ್ನೇಹಿತರ ಹತ್ತಿರ ಯಾವುದೇ ಗೌಪ್ಯತೆಯನ್ನು ಹಂಚಿಕೊಳ್ಳಬೇಡಿ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. 
ವೃಷಭ
ವೃಷಭ: ಇನ್ನೊಬ್ಬರಿಗೆ ವಿಶ್ವಾಸದಲ್ಲಿ ಸಾಲ ಕೊಡುವಾಗ ಸರಿಯಾಗಿ ಯೋಚಿಸಿ ತೀರ್ಮಾನ ಕೈಗೊಳ್ಳಿ. ವಂಶಪಾರಂಪರ್ಯವಾಗಿ ಬಂದ  ವ್ಯಾಪಾರ ಮತ್ತಷ್ಟು ಏಳಿಗೆ ಕಾಣಲಿದೆ. 
ಮಿಥುನ
ಮಿಥುನ: ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾಗಬಹುದು.  ಸ್ವಲ್ಪ ಪ್ರಯತ್ನ ಪಟ್ಟರೆ  ಇದರಲ್ಲಿ ಜಯಗಳಿಸಬಹುದು. ಕುಟುಂಬ ವರ್ಗದಲ್ಲಿ  ನಿರ್ಣಯಗಳಿಗೆ ಸಕಾರಾತ್ಮಕ ಬೆಂಬಲ ದೊರೆಯಲಿದೆ. 
ಕರ್ಕಾಟಕ
ಕರ್ಕಾಟಕ: ಸಾರ್ವಜನಿಕ ಹಿತಾಸಕ್ತಿಗಾಗಿ ಹಣ ಸಂಗ್ರಹ ಮಾಡುವುದು  ಗೌರವಕ್ಕೆ ಚ್ಯುತಿಯನ್ನು ತರುತ್ತದೆ. ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು  ಸೂಕ್ತ  ಕಾಲವಾಗಿದೆ. ಕೆಲವರಿಗೆ ಸಂತಾನ ಭಾಗ್ಯ ಇದೆ. 
ಸಿಂಹ
ಸಿಂಹ: ಎಣಿಕೆಯಂತೆ ಕಾರ್ಯಗಳು ಸಿದ್ಧಿಸುವವು. ನೂತನವಾದ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ. ನಂತರದಲ್ಲಿ  ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು ಎನಿಸಿದ್ದರೂ ಅದು ಅಷ್ಟು ಸುಲಭವಲ್ಲ. 
ಕನ್ಯಾ
ಕನ್ಯಾ: ಸಮಾಜದಲ್ಲಿನ ನಿಮ್ಮ ಮುಂದಾಳತ್ವವನ್ನು ಜನರು ಮೆಚ್ಚಿ, ದೊಡ್ಡ ದೊಡ್ಡ ವಿಚಾರಗಳಿಗೆ ಸಲಹೆಗಳನ್ನು ಕೇಳುವಂತಾಗಲಿದೆ. ವಿದ್ಯಾರ್ಥಿಗಳಿಗೆ ಸಾಧನೆಯ ತಯಾರಿಯನ್ನು ನಡೆಸಲು ಸೂಕ್ತ  ದಿನವಾಗಿದೆ. 
ತುಲಾ
ತುಲಾ: ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿ ಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ದೇಹಕ್ಕೆ ಆಯಾಸವಾದಲ್ಲಿ ಅದನ್ನು ಸ್ವತಃ ಆರೈಕೆ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ
ವೃಶ್ಚಿಕ:ಲೇವಾದೇವಿ ವ್ಯವಹಾರ ನಡೆಸುವವರು ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆಗೊಳ್ಳುವಿರಿ. ಅನಿರೀಕ್ಷಿತವಾಗಿ ಶುಭ ಸುದ್ದಿ ಕೇಳುವಿರಿ. 
ಧನು
ಧನು: ಕುಲದೇವರ ದರ್ಶನದಿಂದ ಈಗಿನ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಬಲ್ಲಿರಿ. ಆಫೀಸಿನಲ್ಲಿ  ಕೆಲಸವೊಂದಕ್ಕೆ ಸಿಬ್ಬಂದಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಹಳದಿ ಬಣ್ಣವು ಶುಭ ತರಲಿದೆ.   
ಮಕರ
ಮಕರ: ರಾಜಕೀಯ ವ್ಯಕ್ತಿಗಳು, ಸಮಾಜ ಸೇವಕರು ಉತ್ತಮ ಹೆಸರಿನಿಂದ ಜನಮನ್ನಣೆ ಗಳಿಸಬಹುದು. ಇಷ್ಟದ ಪ್ರಕಾರವೇ ಎಲ್ಲಾ ಕಾರ್ಯಗಳೂ ನಡೆಯುವ ಕಾಲ ಈ ದಿನವಾಗಿದೆ. 
ಕುಂಭ
ಕುಂಭ: ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿಹಾಕದೆ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳಿ. ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ಷೇರಿನಲ್ಲಿ ಹೆಚ್ಚು ಹಣ ತೊಡಗಿಸಬಹುದು. 
ಮೀನ
ಮೀನ: ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ಹೋಗಲಾಡಿಸಿ ಸಂಘಟಿಸಲು ಮನೆಯವರಲ್ಲಿ ಚರ್ಚೆ ಮಾಡಲು ಸುದಿನ. ಆದರೆ ಕಾರ್ಯಕ್ಷೇತ್ರದಲ್ಲಿ ಯಾರೋ ಮಾಡಿದ ತಪ್ಪಿಗೆ  ಹೆಗಲು ಕೊಡಬೇಕಾದಂತೆ ಆಗಲಿದೆ.