ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ | ಸೆ. 17ರಿಂದ 23ರವರೆಗೆ: ಈ ರಾಶಿಯವರಿಗೆ ಮಾಡಿದ ಕೆಲಸಗಳಲ್ಲಿ ಜಯವಿದೆ
Published 16 ಸೆಪ್ಟೆಂಬರ್ 2023, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ ಕೆಲವು ಆರ್ಥಿಕ ಯೋಜನೆಗಳನ್ನು ಜಾರಿ ಮಾಡುವಿರಿ. ಇಂದಿನ ಎಲ್ಲಾ ಸನ್ನಿವೇಶಗಳು ನಿಮ್ಮ ಪರ ಇರುತ್ತವೆ ಎಂದು ಭ್ರಮಿಸಿಕೊಳ್ಳುವುದು ತಪ್ಪು. ಪರಿಶ್ರಮ ಮತ್ತು ಬುದ್ಧಿವಂತಿಕೆಯನ್ನು ಬಳಸಿ ಮಾಡಿದ ಕೆಲಸಗಳಲ್ಲಿ ಸಂಪೂರ್ಣ ಜಯವಿರುತ್ತದೆ. ಸೋಮಾರಿತನವನ್ನು ದೂರ ಇಡುವುದು ಒಳ್ಳೆಯದು.. ನಿಮ್ಮ ಸಂಘಟನಾ ಶಕ್ತಿಯನ್ನು ಬೇರೆಯವರು ದುರುಪಯೋಗ ಮಾಡಿ ಕೊಳ್ಳಬಹುದು. ಸಂಗಾತಿಯು ಮನೆಯಲ್ಲಿ ಅಶಾಂತಿ ಉಂಟು ಮಾಡಬಹುದು. ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಮೇಲಧಿಕಾರಿ ಗಳ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ನಿಮಗೆ ಬಹಳ ಒಳ್ಳೆಯದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ.
ವೃಷಭ
ಈ ದಿನ ಮಾಡುವ ಕೆಲಸಗಳಲ್ಲಿ ತೃಪ್ತಿ ಮತ್ತು ಸಂತೋಷವಿರುತ್ತದೆ. ಮಗನ ವಿಷಯದಲ್ಲಿಸಂತೋಷ ದಾಯಕ ವಾರ್ತೆಗಳನ್ನು ಕೇಳುವಿರಿ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣ ಬಹುದು. ಹಣಕಾಸಿನ ಸ್ಥಿತಿಯೂ ಸಹ ಪ್ರಗತಿ ಯತ್ತ ಸಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾ ಗುವ ಸಾಧ್ಯತೆ ಇದೆ. ಕೋರ್ಟುಕಚೇರಿ ಕೆಲಸ ಗಳಲ್ಲಿ ಹೆಚ್ಚಿನ ಅಲೆದಾಟವಿರುತ್ತದೆ. ಕಾರ್ಯ ಕ್ಷೇತ್ರ ದಲ್ಲಿ ಪರಿ ಣಿತರು ನಿಮಗೆ ಸಹಾಯ ಮಾಡಿ ಕಾರ್ಯ ಮುಗಿಸಿ ಕೊಡುವರು. ಕ್ರೀಡಾಪಟುಗಳಿಗೆ ಉತ್ತಮ ಸೌಕರ್ಯ ಸೌಲಭ್ಯದೊರೆಯುತ್ತದೆ. ಮೇಲಧಿಕಾರಿಗಳ ಬಳಿ ನಿಮ್ಮ ವೇತನದ ಬಗ್ಗೆ ಮಾತ ನಾಡಬಹುದು. ಸರ್ಕಾರಿ ಮಟ್ಟದ ಸಹಾಯಧನಗಳು ಸರಾಗವಾಗಿ ಹರಿದು ಬರುತ್ತವೆ. ಸಹೋದರಿಯರು ನಿಮಗೆ ಸಾಕಷ್ಟು ಸಹಾಯ ಮಾಡುವರು.
ಮಿಥುನ
ಪ್ರತಿನಿತ್ಯದ ಕೆಲಸಗಳ ಜೊತೆ ಹೊಸ ಹೊಸ ಕೆಲಸಗಳು ನಿಮ್ಮಹೆಗಲೇರುತ್ತವೆ.ನಿಮ್ಮಕೆಲಸಕಾರ್ಯ ಗಳಿಗೆ ಹಿರಿಯರಆಶೀರ್ವಾದ ದೊರೆಯುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಪೊಲೀಸ್ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರದ ಊರಿಗೆ ಹೋಗಲೇ ಬೇಕಾದ ಸಂದರ್ಭವಿದೆ. ಧನದಾಯವು ಉತ್ತಮವಾ ಗಿದ್ದರೂ ಸಹ ಖರ್ಚಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಕೆಲವು ಸರ್ಕಾರಿ ನೌಕರರಿಗೆ ವೈಯಕ್ತಿಕ ವಿಚಾರಗಳಿಗಾಗಿ ಅನೇಕ ಅಡ್ಡಿ ಆತಂಕಗಳು ಕಾಣಿಸ ಬಹುದು. ಕಚೇರಿ ಕೆಲಸಗಳಲ್ಲಿ ಆದ ತಪ್ಪುಗಳನ್ನು ಸರಿಪಡಿಸಲು ಸಹೋದ್ಯೋಗಿಗಳ ಸಹಕಾರ ದೊರೆ ಯುತ್ತದೆ. ಸಿಗುವ ಅವಕಾಶಗಳನ್ನು ಬಳಸಿಕೊಂಡಲ್ಲಿ ವಿದೇಶ ಯಾನ ದೊರೆಯಬಹುದು. ಆಸ್ತಿವಿಚಾರದಲ್ಲಿ ಹೆಚ್ಚಿನ ಮುನ್ನಡೆಯನ್ನು ಕಾಣಬಹುದು.
ಕರ್ಕಾಟಕ
ಉದ್ಯೋಗದಲ್ಲಿ ಮುಜುಗರ ತರುವಂತ ಸಂದರ್ಭಗಳು ಎದುರಾದರೂ ಅದನ್ನು ದಾಟಿ ಬರುವ ಶಕ್ತಿ ನಿಮಗಿರುತ್ತದೆ. ಗೃಹಣಿಯರಿಗೆ ಕುಟುಂಬ ಸದಸ್ಯ ರಿಂದ ಮೆಚ್ಚುಗೆಯ ಅಥವಾ ಹೊಗಳಿಕೆಯ ಮಾತು ಗಳು ಕೇಳಿ ಬರಬಹುದು. ಲೆಕ್ಕ ಪತ್ರ ಗುಮಾಸ್ತರುಗಳು ಮಾಡುವ ತಪ್ಪಿನಿಂದ ಇಲಾಖೆಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ ಎಚ್ಚರವಹಿಸಿರಿ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನವ್ಯವಹಾರನಡೆದು ಲಾಭವಿರುತ್ತದೆ. ಇಷ್ಟು ದಿನ ಪಟ್ಟಶ್ರಮಕ್ಕೆ ಈಗ ಸೂಕ್ತಫಲ ದೊರೆಯುತ್ತದೆ. ಕೆಲವು ಮೋಸಗಾರರು ಬಹಳ ಒಳ್ಳೆಯವರಂತೆ ನಟಿಸಿ ನಿಮ್ಮ ವ್ಯವಹಾರಕ್ಕೆ ಬರಲೇತ್ಮಿಸುವರು, ಇಂಥವರನ್ನು ದೂರ ವಿಡಿರಿ.ಧನದಾಯವು ನಿಮ್ಮ ನಿರೀಕ್ಷೆಯಮಟ್ಟಕ್ಕೆಇದ್ದೇ ಇರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಸಾಂಪ್ರದಾಯಕ ಕೃಷಿಕರಿಗೆ ಹೆಚ್ಚಿನ ಪೋಷಣೆ ದೊರೆಯುತ್ತದೆ.
ಸಿಂಹ
ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ಇದ್ದ ಕಾನೂನು ತೊಂದರೆಗಳು ಪರಿಹಾರವಾಗುತ್ತದೆ. ನಿಮ್ಮ ಮಕ್ಕಳು ಆಡುವ ಮಾತು ಗಳು ನಿಮಗೆ ಸ್ವಲ್ಪ ಘಾಸಿಯಾಗಬಹುದು. ನವೀನ ರೀತಿಯ ಸ್ತ್ರೀಯರ ಉಡುಪುಗಳನ್ನು ಮಾರುವವರಿಗೆ ಹೆಚ್ಚಿನ ರೀತಿಯ ಲಾಭವಿರುತ್ತದೆ. ಹಿರಿಯ ಅಧಿಕಾರಿಗಳಿಗೆ ನಂಬಿಕಸ್ತ ಸೇವಕರುಗಳು ದೊರೆಯುತ್ತಾರೆ. ಕಾರ್ಮಿಕರೊಡನೆ ಮಾನವೀಯತೆಯಿಂದ ವರ್ತಿಸಿದಲ್ಲಿ ನಿಮ್ಮನ್ನು ಬಹಳ ಗೌರವದಿಂದ ಕಾಣುತ್ತಾರೆ. ಮನೋರಂಜನೆಗಾಗಿ ಈಗ ಕುಟುಂಬದವರೊಡನೆ ಪ್ರವಾಸ ಹೋಗುವಿರಿ. ಪಾಲು ದಾರಿಕೆ ವ್ಯವಹಾರಗಳಲ್ಲಿ ನಿಮಗೆ ಅಭಿವೃದ್ಧಿ ಇರುತ್ತದೆ. ಪತ್ನಿಯ ಆರೋಗ್ಯದಲ್ಲಿ ಅನಿರೀಕ್ಷಿತ ಏರುಪೇರುಗಳು ಉಂಟಾದರೂ ತಹಬಂದಿಗೆ ಬರುತ್ತದೆ. ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದು ಕೊಳ್ಳುವುದು ಸೂಕ್ತ. ಹಿರಿಯರಿಗೆ ವಿದೇಶದಲ್ಲಿರುವ ಮಕ್ಕಳಿಂದ ಧನಸಹಾಯ ಬರುವ ಸಾಧ್ಯತೆ ಇದೆ.
ಕನ್ಯಾ
ಹೂವಿನ ಬೆಳೆಗಾರರಿಗೆ ಹೆಚ್ಚಿನ ಮಾರುಕಟ್ಟೆ ದೊರೆಯುತ್ತದೆ. ವಾಣಿಜ್ಯ ಬೆಳೆಯನ್ನು ಬೆಳೆಯುವವ ರಿಗೆ ಉತ್ತಮ ಆದಾಯವಿರುತ್ತದೆ. ಇಷ್ಟಪಟ್ಟ ಆಭರಣ ವನ್ನು ಮನಸ್ಸು ಮಾಡಿ ಪಡೆಯುವಿರಿ. ತವರು ಮನೆ ಯಿಂದ ಆಸ್ತಿ ಅಥವಾ ಹಣ ದೊರೆಯಬಹುದು. ಹಣ ಕಾಸಿಗೆಸಂಬಂಧಿಸಿದ ಯಾವುದೇ ದೊಡ್ಡಹೂಡಿಕೆಗಳು ಈಗ ಬೇಡ. ವರ್ಗಾವಣೆಗಾಗಿ ಮಾಡಿದ್ದ ಪ್ರಯತ್ನಗಳು ಫಲ ಕೊಡುವುದು ಕಡಿಮೆ. ಲೆವಾದೇವಿ ವ್ಯವಹಾರ ವನ್ನು ನಡೆಸುವವರಿಗೆ ಹೆಚ್ಚಿನ ನಷ್ಟ ಆಗಬಹುದು. ಸೋದರಿಯರಿಂದ ಕೆಲಸಗಳಿಗೆ ಹೆಚ್ಚಿನಸಹಕಾರ ಈಗ ದೊರೆಯುತ್ತದೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ ಯನ್ನು ಕಾಣಬಹುದು. ವಿದೇಶದಲ್ಲಿ ಓದುತ್ತಿರುವವ ರಿಗೆ ವೀಸಾ ತೊಂದರೆಗಳು ಬಂದರೂ ತದನಂತರ ಸರಿಯಾಗುತ್ತವೆ. ವೈದ್ಯರುಗಳಿಗೆ ಹೆಚ್ಚು ಪ್ರೋತ್ಸಾಹ ದೊರೆತು ಹೆಸರು ಪಡೆಯುವರು.
ತುಲಾ
ನಿಮ್ಮ ಪೂರ್ವ ಆಲೋಚನೆಯಂತೆ ಕುಟುಂಬದಲ್ಲಿನ ಕೆಲಸಗಳು ನಿಧಾನವಾಗಿ ಆಗುತ್ತದೆ. ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇದ್ದರೂ ಅದನ್ನು ಬಳಸುವ ಬಗ್ಗೆ ಸರಿಯಾಗಿ ಆಲೋಚನೆ ಮಾಡಿರಿ. ಆಡಿಟರುಗಳಿಗೆ ಹೆಚ್ಚಿನ ವರಮಾನದ ಸಾಧ್ಯತೆ ಇದೆ. ಆರೋಗ್ಯದ ಸುಧಾರಣೆಗಾಗಿ ಆಹಾರ ಕ್ರಮಗಳನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಅತಿಯಾದ ಮಾನಸಿಕ ಚಿಂತೆ ಕಾಡುವ ಸಾಧ್ಯತೆ ಇದೆ. ಸಂಗಡಿಗರ ಸಹಾಯ ದಿಂದ ವ್ಯವಹಾರ ಆರಂಭಿಸಲು ಪ್ರಯತ್ನಿಸುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಸಂಗಾತಿಯು ನಿಮ್ಮ ಮೇಲೆ ಅವರ ಪ್ರಭಾವವನ್ನು ಬೀರಲು ಯತ್ನಿಸುವರು. ಕೃಷಿ ಉತ್ಪನ್ನಗಳನ್ನು ಮಾರು ವವರಿಗೆ ಹೆಚ್ಚಿನ ವ್ಯವಹಾರ ಇರುತ್ತದೆ. ಮೂಳೆಯ ತೊಂದರೆಗಳು ಕೆಲವರನ್ನು ಕಾಡಬಹುದು. ಅಧಿರು ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ.
ವೃಶ್ಚಿಕ
ನಿಮ್ಮ ಕೆಲವೊಂದು ಬುದ್ಧಿವಂತಿಕೆಯ ತೀರ್ಮಾನಗಳು ನಿಮಗೆ ಗೌರವವನ್ನು ತರುತ್ತವೆ. ಕಾನೂನು ಪಂಡಿತರಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಲಲಿತ ಕಲಾ ಕ್ಷೇತ್ರದಲ್ಲಿರುವವರಿಗೆ ಸೂಕ್ತ ಗೌರವ ದೊರೆಯುತ್ತದೆ. ಕರ್ತವ್ಯ ಕೊರತೆಯಿಂದಾಗಿ ಉಲ್ಲಾಸವನ್ನು ಕಳೆದುಕೊಳ್ಳುವ ಸಂದರ್ಭವಿರುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರಬಹುದು. ಉನ್ನತ ವ್ಯಾಸಂಗ ಮಾಡುವ ಅವಕಾಶಕ್ಕಾಗಿ ಶ್ರಮ ವಹಿಸಬೇಕಾಗಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಹೈನುಗಾರಿಕೆ ಮಾಡುವ ವರಿಗೆ ಲಾಭ ಹೆಚ್ಚುತ್ತದೆ. ಕೃಷಿ ಸಂಬಂಧಿತ ಸಲಕರಣೆ ಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚು ವ್ಯಾಪಾರವಿರುತ್ತದೆ. ಮಕ್ಕಳ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆ ಯನ್ನು ಕಾಣಬಹುದು.
ಧನು
ಮಕ್ಕಳ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಮಾಡಬೇಕಾಗಿರುವ ಕೆಲಸಗಳನ್ನುಮಾಡಲುಮುಂದಾ ಗುವಿರಿ. ಅದಿರು ಸಂಬಂಧಿತ ಕಚ್ಚಾ ವಸ್ತುಗಳನ್ನು ಮಾರುವವರಿಗೆ ಲಾಭವಿರುತ್ತದೆ. ದಿನಗೂಲಿ ಕಾರ್ಮಿಕ ರಿಗೆ ಹೆಚ್ಚುಶ್ರಮದಿಂದ ಹೆಚ್ಚುಆದಾಯ ಈಗ ಗಳಿಸುವ ಅವಕಾಶ ಇದೆ. ಹೆಚ್ಚು ಒಡನಾಟ ಹೊಂದಿದ ವ್ಯಕ್ತಿಗಳ ಮಾತುಗಳು ಮನಸ್ಸಿಗೆ ಬೇಸರ ತರಬಹುದು. ನಿಮ್ಮ ವ್ಯವಹಾರಗಳಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿರಿ. ಭೂಮಿಗೆ ಸಂಬಂಧಪಟ್ಟಂತೆ ಹಲವು ದಿನಗಳಿಂದ ಪ್ರಯತ್ನ ಪಡುತ್ತಿದ್ದ ಕೆಲಸಗಳು ಈಗಾಗುತ್ತವೆ. ಯಾರ ನೆರವು ಇಲ್ಲದೆ ನಿಮ್ಮ ಮುಖ್ಯ ಕೆಲಸಗಳನ್ನು ನೀವೇ ಮಾಡಿಕೊಳ್ಳುವುದು ಉತ್ತಮ. ದಿನಸಿ ವ್ಯಾಪಾರಿಗಳಿಗೆ ಹೆಚ್ಚುವ್ಯಾಪಾರವಾಗುವ ಲಕ್ಷಣಗಳಿವೆ. ಹಣದ ಒಳ ಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಶತ್ರುಗಳನ್ನು ನಿಗ್ರಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಿರಿ.
ಮಕರ
ನಿಮ್ಮನ್ನು ಗೌರವದಿಂದ ಕಾಣುವ ಜನರ ಜೊತೆ ಕಾಲ ಕಳೆಯುವ ಯೋಗವಿದೆ. ವ್ಯವಹಾರಗ ಳಲ್ಲಿ ಎಲ್ಲಾ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ಕಂಡರೂ ಸಹ ಒಳಗೆ ಮೋಸ ನಡೆಯುತ್ತಿರುತ್ತದೆ ಎಚ್ಚರವಹಿಸಿರಿ. ತಾಂತ್ರಿಕ ಅಭಿಯಂತರರಿಗೆ ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರಗಳಲ್ಲಿ ಹೊಸ ವ್ಯಕ್ತಿಯ ಪರಿಚಯವಾಗಿ ಅವರಿಂದ ವ್ಯವಹಾರಗಳು ಹೆಚ್ಚು ಅಭಿವೃದ್ಧಿಯನ್ನು ಹೊಂದುವುದು. ವ್ಯಕ್ತಿಗಳ ಅಹಂಕಾರದ ಮಾತು ಅವರಿಗೆ ಶಾಪವಾಗಬಹುದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಮಧ್ಯಮ ಫಲಿತಾಂಶವಿರುತ್ತದೆ. ಗುಪ್ತ ರೋಗಗಳಿರುವವರು ಚಿಕಿತ್ಸೆಗೆ ಹೋಗುವುದು ಬಹಳ ಒಳ್ಳೆಯದು. ಧನಾದಾಯವು ಮಧ್ಯಮ ಗತಿಯಲ್ಲಿ ರುತ್ತದೆ. ಕೃಷಿ ಪಂಡಿತರಿಗೆ ಹೆಚ್ಚಿನ ಮನ್ನಣೆ ಇರುತ್ತದೆ. ಆರೋಗ್ಯದ ಕಡೆ ನಿಗಾ ಇರಲಿ.
ಕುಂಭ
ವಾಹನ ತಂತ್ರಜ್ಞರಿಗೆ ವಿಪುಲ ಅವಕಾಶಗಳು ದೊರೆತು ಹೊಸಉದ್ಯೋಗ ಅಥವಾ ಹೊಸ ರೀತಿಯ ಸಂಪಾದನೆಯಮಾರ್ಗ ದೊರೆಯುತ್ತದೆ.ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಮತ್ತು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವಕ ಕಾರ್ಮಿಕರಗಳಿಗೆ ಆಡಳಿತ ವರ್ಗ ದಿಂದ ಹೆಚ್ಚಿನಅನುಕೂಲಗಳು ದೊರೆಯುತ್ತವೆ. ಹಣ್ಣು ಮತ್ತು ಹೂವಿನ ಮಾರಾಟಗಾರರಿಗೆ ಹೆಚ್ಚು ವ್ಯಾಪಾರ ನಡೆದು ಲಾಭಬರುತ್ತದೆ. ಸರಕು ಸಾಗಣೆ ಮಾಡುವವ ರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಹೊಸ ರೀತಿಯ ಯೋಜನೆಗಳಿಗೆ ರೂಪ ನೀಡಲು ಬಹಳಷ್ಟು ತಯಾರಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಮಧ್ಯಮ ಫಲಿತಾಂಶ ಇರುತ್ತದೆ. ಧನಾದಾಯವು ಸಾಮಾನ್ಯ ಗತಿಯಲ್ಲಿರುತ್ತದೆ, ಖರ್ಚಿಗೆ ಕಡಿವಾಣ ಹಾಕುವುದು ಬಹಳ ಒಳ್ಳೆಯದು.
ಮೀನ
ಕುಟುಂಬದಲ್ಲಿ ನಡೆದ ಹಳೆಯ ಕಹಿ ಘಟನೆ ಗಳನ್ನು ಕೆದಕುವುದರಿಂದ ನಿಮಗೆ ಹಾನಿ. ಒಡಹುಟ್ಟಿ ದವರೊಡನೆ ಹೊಂದಾಣಿಕೆ ಮಾಡಿಕೊಳ್ಳೋದುಬಹಳ ಒಳ್ಳೆಯದು. ವೃತ್ತಿರಂಗದಲ್ಲಿ ನಮಗಿಂತ ಪರಿಣಿತರು ಇರುತ್ತಾರೆ ಎಂಬುದನ್ನು ಗಮನಿಸಿ. ವ್ಯಾಪಾರದಲ್ಲಿನ ಬಂಡವಾಳ ಹೆಚ್ಚಿಸುವ ಬಗ್ಗೆ ಹೆಚ್ಚು ಗಮನ ಕೊಡಿರಿ. ವಾಹನ ಚಾಲನೆ ಮಾಡುವಾಗ ಬಹಳಎಚ್ಚರಿಕೆ ಇರಲಿ. ಹಣದ ಒಳಹರಿವು ಹೆಚ್ಚಿಗೆ ಇದ್ದಂತೆ ಕಂಡರೂ ಸಹ ಖರ್ಚು ಅಷ್ಟೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹಗಳು ದೊರೆಯುತ್ತವೆ. ಗಂಟಲು ಅಥವಾ ಉಸಿರಾಟದ ತೊಂದರೆ ಇರುವವರು ಸೂಕ್ತ ಚಿಕಿತ್ಸೆ ಪಡೆಯಿರಿ. ಸಾಂಪ್ರದಾಯಕ ಬೀಜೋತ್ಪಾದಕರಿಗೆ ವಿಪುಲ ಮಾರುಕಟ್ಟೆ ದೊರೆಯುತ್ತದೆ.ಸಂಗಾತಿಗೆ ಕೃಷಿ ಯಲ್ಲಿ ಅತಿಯಾದ ಆಸಕ್ತಿ ಮೂಡುತ್ತದೆ. ವೃತ್ತಿಯಲ್ಲಿ ವೇತನ ಏರಿಕೆ ಸಂದರ್ಭ ಕಂಡರೂ ಕೈಗೂಡುವುದು ನಿಧಾನ.