ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
24/03/2024 - 30/03/2024
ವಾರ ಭವಿಷ್ಯ: ಆಸ್ತಿಯ ದಾಖಲೆಗಳ ಬಗ್ಗೆ ಈ ರಾಶಿಯವರು ಎಚ್ಚರ ವಹಿಸುವುದು ಅಗತ್ಯ
Published 30 ಮಾರ್ಚ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ವ್ಯವಹಾರಗಳಲ್ಲಿ ಉತ್ತಮ ಸ್ಥಾನ ಪಡೆಯಲು ಪ್ರಯತ್ನ ಮಾಡುವಿರಿ. ಬಹಳ ನಾಜೂಕಾಗಿ ಮಾತನಾಡಿ ಬೇರೆಯವರ ಮೇಲೆ ತಪ್ಪು ಹೊರಿಸುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾಲುದಾರರನ್ನು ಒಲಿಸಿಕೊಂಡು ವ್ಯವಹಾರವನ್ನು ನಿಮ್ಮ ಕೈಗೆ ತೆಗೆದುಕೊಳ್ಳಲು ಪ್ರಯತ್ನಪಡುವಿರಿ. ಸ್ಥಿರಾಸ್ತಿ ವಿಚಾರಗಳಲ್ಲಿ ಹೆಂಗಸರಿಂದ ಸ್ವಲ್ಪ ಸಮಸ್ಯೆಯಾಗುವ ಸಂದರ್ಭಗಳಿವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸಿದ್ದರು ನಿರೀಕ್ಷಿತ ಫಲಿತಾಂಶ ವ್ಯತ್ಯಾಸವಾಗಬಹುದು. ಉದರ ಸಂಬಂಧಿ ತೊಂದರೆ ಗಳು ಭಾದಿಸಬಹುದು. ಸಂಗಾತಿಯ ವ್ಯವಹಾರಗಳಿಗೆ ಬಂಡವಾಳ ಹೂಡಬೇಕಾದ ಪರಿಸ್ಥಿತಿ ಇರುತ್ತದೆ. ನಿಮ್ಮ ಉದ್ಯೋಗದ ಜಾಗದಲ್ಲಿ ಮಹಿಳೆಯರಿಂದ ಎಚ್ಚರವಾ ಗಿರಿ, ಅವಮಾನವಾಗುವ ಸಾಧ್ಯತೆಗಳಿವೆ. ದಿನಸಿಯ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ. ವಾಹನ ರಿಪೇರಿ ಗಾಗಿ ಹೆಚ್ಚು ಹಣ ಖರ್ಚಾಗಬಹುದು. ಹೈನುಗಾರಿಕೆ ಮಾಡುವವರಿಗೆ ಕಡಿಮೆ ಅಭಿವೃದ್ಧಿ ಇರುತ್ತದೆ.
ವೃಷಭ
ವ್ಯಾವಹಾರಿಕವಾಗಿ ಹೆಚ್ಚು ಮುಂದುವರೆಯಲು ಪ್ರಯತ್ನಪಡುವಿರಿ. ಆದಾಯವು ಸ್ವಲ್ಪ ಕಡಿಮೆ ಸಹ ಇದ್ದರೂ ತೀರಾ ಕಡಿಮೆಯೇನು ಇರುವುದಿಲ್ಲ. ನಿಮ್ಮ ತಾಯಿಯ ಜೊತೆ ಉತ್ತಮ ಸಂಬಂಧವನ್ನು ಹೊಂದುವಿರಿ. ಸರ್ಕಾರದ ಜೊತೆಗೆ ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚು ಅನುಕೂಲವಿರುತ್ತದೆ. ವಿದೇಶದಲ್ಲಿ ಓದಬೇಕೆನ್ನುತ್ತಿರುವವರಿಗೆ ಅನುಕೂಲತೆಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಗತಿಯ ಫಲಿತಾಂಶವಿರುತ್ತದೆ. ಸ್ತ್ರೀಯರಲ್ಲಿ ಯಾವುದಾದರೂ ಒಂದುರೀತಿಯ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಪ್ರೀತಿ ಪ್ರೇಮಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ ಹಾಗೂ ಇದಕ್ಕೆ ತಾಯಿಯ ಒಪ್ಪಿಗೆ ದೊರೆಯುತ್ತದೆ. ರಾಜಕಾರಣಿಗಳಿಗೆ ಎಲ್ಲಾ ರೀತಿಯ ಸಹಕಾರಗಳಿದ್ದರೂ ಕಾನೂನಿನ ಅಳುಕು ಇದ್ದೇ ಇರುತ್ತದೆ. ಯಂತ್ರಗಳನ್ನು ದುರಸ್ತಿ ಮಾಡುವವರಿಗೆ ಬೇಡಿಕೆಹೆಚ್ಚಾಗಿ ಆದಾಯ ಹೆಚ್ಚುತ್ತದೆ.
ಮಿಥುನ
ಬಹಳ ವ್ಯವಹಾರಿಕವಾಗಿ ಯೋಚಿಸಿ ಅದನ್ನು ಕಾರ್ಯಗತ ಮಾಡುವಿರಿ. ಧನಾದಾಯವು ಉತ್ತಮವಾಗಿದ್ದರೂ ಸಹ ಅದನ್ನು ಮೀರಿದ ಖರ್ಚುಗಳು ಬರಬಹುದು. ನಿಮ್ಮ ಕೆಲಸಗಳಿಗೆ ಕೆಲವು ಹಿರಿಯರು ಸ್ವಲ್ಪ ವಿರೋಧ ವ್ಯಕ್ತಪಡಿಸುವರು. ವಿದೇಶದಲ್ಲಿರುವವರು ತಮ್ಮ ಸ್ಥಿರಾಸ್ತಿಯನ್ನು ಮಾಡಿಕೊಳ್ಳಲು ಈಗ ಸಕಾಲ. ವಿದ್ಯಾರ್ಥಿಗಳಿಗೆ ಮಧ್ಯಮವರ್ಗದ ಫಲಿತಾಂಶವಿರುತ್ತದೆ. ತಂದೆಯ ಸೂಚನೆಗಳು ನಿಮ್ಮ ವಿದ್ಯಾಭ್ಯಾಸದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ಸಂಗಾತಿಯ ವ್ಯವಹಾರಗಳಲ್ಲಿ ಪ್ರಗತಿ ಮೂಡಿ ನಿಮಗೂ ಸ್ವಲ್ಪ ಧನ ಸಹಾಯ ಆಗುವ ಸಾಧ್ಯತೆ ಇದೆ. ವಿದೇಶಗಳಿಗೆ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡುವವರ ಆದಾಯಗಳು ಹೆಚ್ಚುತ್ತದೆ. ನಿಮ್ಮ ಮನಸಂತೋಷಕ್ಕಾಗಿ ಸ್ವಲ್ಪದಾನ ಧರ್ಮವನ್ನು ಮಾಡುವಿರಿ. ಅನಿರೀಕ್ಷಿತ ವಾಗಿ ಖರ್ಚುಗಳು ಬರುವ ಸಾಧ್ಯತೆಗಳಿವೆ.
ಕರ್ಕಾಟಕ
ಬಹಳ ಉತ್ಸಾಹದಲ್ಲಿ ಕೆಲಸ ಕಾರ್ಯ ಆರಂಭಿಸುವಿರಿ. ಹಣಕಾಸಿನ ಹರಿವು ನಿರೀಕ್ಷೆಯಷ್ಟಿಲ್ಲದಿದ್ದರೂ ಸಾಲ ಮಾಡುವ ಪರಿಸ್ಥಿತಿ ಇರುವುದಿಲ್ಲ. ಬರಬೇಕಾಗಿದ್ದ ಸರ್ಕಾರಿ ಹಣಗಳು ನಿಧಾನವಾದರೂ ಬರುತ್ತವೆ. ನಿಮ್ಮ ಆಲಸಿ ನಡವಳಿಕೆಗಳೇ ಕೆಲಸಕಾರ್ಯಗಳು ನಿಧಾನವಾಗಲು ಕಾರಣವಾಗುತ್ತದೆ. ಕೊಳ್ಳಬೇಕೆಂದಿದ್ದ ಆಸ್ತಿಯ ದಾಖಲೆಗಳಲ್ಲಿ ವ್ಯತ್ಯಾಸಗಳಿರುವ ಸೂಚನೆ ಇದೆ. ಸರಿಯಾಗಿ ಪರಿಶೀಲಿಸಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಯಶಸ್ಸು ಇರುತ್ತದೆ. ಅನಾರೋಗ್ಯದಿಂದ ನರಳುತ್ತಿರುವವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ಕೆಲವು ಕಠಿಣ ನಿಯಮಗಳು ನಿಮಗೆ ಆಶ್ಚರ್ಯಮೂಡಿಸುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರೀಕ್ಷೆಗೆ ಮೀರಿದ ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಉತ್ತಮ ಗೌರವದ ಜೊತೆಗೆ ಸ್ಥಾನವೂ ಹೆಚ್ಚಾಗುತ್ತದೆ. ಮಣ್ಣಿನ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ.
ಸಿಂಹ
ವಾರದ ಆರಂಭಿಕ ಹಂತಗಳು ಅಷ್ಟು ಸುಖವಾಗಿರುವುದಿಲ್ಲ. ಧನಾದಾಯವು ಮಂದಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಗಳಲ್ಲಿ ಸಂಗಾತಿಯ ನೆರಳನ್ನು ಕಾಣಬಹುದು. ತಾಯಿಯು ನಿಮಗೆ ಆಸ್ತಿಯನ್ನು ಕೊಳ್ಳಲು ಸಹಾಯಮಾಡುವರು. ಕುಟುಂಬದ ಒಗ್ಗಟ್ಟಿಗಾಗಿ ತಾಯಿ ಶ್ರಮಿಸುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಭಿವೃದ್ಧಿ ಇರುತ್ತದೆ, ಗಣಿತ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಮೂಳೆಯ ತೊಂದರೆಗಳು ಅಥವಾ ನೋವುಗಳು ಕೆಲವರನ್ನು ಬಾಧಿಸಬಹುದು. ಸಂಗಾತಿ ಕಡೆಯವರು ನಿಮ್ಮ ಬಗ್ಗೆ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳ ಮೇಲೆ ನಿಮಗೆ ಹಿಡಿತ ಬರು ತ್ತದೆ.ತಂದೆಯಿಂದ ನಿಮಗೆ ಧನ ಸಹಾಯದೊರೆಯುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಕಿರಿಯ ಅಧಿಕಾರಿಗಳಿಂದ ಸಹಕಾರ ದೊರೆತು ಗುರಿ ಸಾಧಿಸುವಿರಿ. ಲೋಹಗಳ ಮಿಶ್ರಣವನ್ನು ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.
ಕನ್ಯಾ
ಕೆಲಸ ಕಾರ್ಯಗಳನ್ನು ಮುಂದುವರೆಸಲು ಅಷ್ಟು ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮುಂದುವರಿಸುವಿರಿ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಒಂದೆರಡು ದಿನಗಳ ನಂತರ ಚುರುಕಾಗಿ ಕೆಲಸ ಮಾಡುವಿರಿ. ಆಸ್ತಿ ವಿಚಾರದಲ್ಲಿ ಬಹಳ ಆತುರ ಬೇಡ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಹಾಕಿ ಕಡಿಮೆ ಫಲಿತಾಂಶವನ್ನು ಪಡೆಯುವ ಯೋಗವಿದೆ. ಉಸಿರಾಟದ ತೊಂದರೆ ಅಥವಾ ಮೂಳೆಯ ತೊಂದರೆಗಳಿರುವವರು ಹೆಚ್ಚು ಎಚ್ಚರವಹಿಸಿರಿ. ಸಾಲಕೊಟ್ಟಿರುವವರು ವಸೂಲಿಗಾಗಿ ನಿಮ್ಮಲ್ಲಿಗೆ ಬರಬಹುದು. ಸಂಗಾತಿಯ ಬೇಜವಾಬ್ದಾರಿತನ ನಿಮ್ಮನ್ನು ಕೆರಳಿಸುತ್ತದೆ. ವೃತ್ತಿಯಲ್ಲಿ ಏಳಿಗೆ ಇರುವುದಿಲ್ಲ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಆದಾಯ ಇರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬಂಧುಗಳ ನಡುವೆ ಹೊಸ ಸಮಸ್ಯೆಗಳು ಉದ್ಭವವಾಗಬಹುದು.
ತುಲಾ
ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಆಲೋಚನೆಯನ್ನು ಮಾಡುವಿರಿ. ಧನಾದಾಯವು ನಿರೀಕ್ಷೆಯ ಹತ್ತಿರಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮ ನಡವಳಿಕೆಗಳ ಮೇಲೆ ಹಣದ ಛಾಯೆ ಎದ್ದು ಕಾಣುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ಮುಂದುವರೆಯಲು ಸಕಾಲವಲ್ಲ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಕೆಲವರಿಗೆ ಚರ್ಮರೋಗಗಳು ಭಾಧಿಸುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಲಾಭವಿಲ್ಲದಿದ್ದರೂ ನಷ್ಟ ಇರುವುದಿಲ್ಲ. ಸಂಗಾತಿಗಾಗಿ ಹೆಚ್ಚು ಹಣ ಕೊಡಬೇಕಾಗಬಹುದು. ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯ ಕಡಿಮೆ ಯಾಗಬಹುದು. ಹಿರಿಯರ ಸಹಾಯಗಳಲ್ಲಿ ಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ವಿದೇಶದಲ್ಲಿ ಓದುತ್ತಿ ರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ.
ವೃಶ್ಚಿಕ
ತುಂಬಾ ಉತ್ಸಾಹ ಭರಿತರಾಗಿರುವಿರಿ. ಧನದಾಯವು ಇದ್ದರೂ ಸಹ ಅಷ್ಟೇ ಖರ್ಚು ಬರುತ್ತದೆ. ನಿಮ್ಮ ಚಟುವಟಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವಿರಿ. ಕೃಷಿ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ತಳೆದು ಅದನ್ನು ಮಾಡುವಿರಿ. ಆಸ್ತಿ ವಿಚಾರಗಳಲ್ಲಿ ಹೊಸ ಗೊಂದಲಗಳು ಬರಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಪ್ರಗತಿ ಇರುತ್ತದೆ. ರಕ್ತದಲ್ಲಿ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯಿಂದ ಕೆಲವೊಮ್ಮೆ ಸಹಕಾರ ಸಿಕ್ಕರು ಕೆಲವೊಮ್ಮೆ ಸಿಗದಿರಬಹುದು. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚು ಲಾಭವಾಗುತ್ತದೆ. ಕೃಷಿ ಮಾಡುವವರಿಗೆ ಮತ್ತು ಹೈನುಗಾರಿಕೆ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಧರ್ಮ ಕಾರ್ಯಗಳಲ್ಲಿ ನಿಮ್ಮ ಪ್ರಾಮುಖ್ಯತೆ ಕಡಿಮೆಯಾಗಬಹುದು. ಸರ್ಕಾರಿ ಕಚೇರಿ ಕೆಲಸಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು.
ಧನು
ವಾರದ ಆರಂಭದಲ್ಲಿ ನಿಮ್ಮಲ್ಲಿ ಬಹಳ ಬುದ್ಧಿವಂತಿಕೆ ಇರುತ್ತದೆ. ಧನಾದಾಯವು ಮಂದಗತಿಯಲ್ಲಿರುತ್ತದೆ. ನ್ಯಾಯವಾಗಿ ಮಾತನಾಡಿ ಎಲ್ಲರಿಗೂ ಪ್ರಿಯವಾಗುವಿರಿ. ಶತ್ರುಗಳ ತಂತ್ರಕ್ಕೆ ನೀವು ಹೂಡುವ ಪ್ರತಿತಂತ್ರ ಅವರನ್ನು ತಣ್ಣಗಾಗಿಸುವುದು. ವಿದೇಶದಲ್ಲಿರುವವರು ಅಲ್ಲಿ ಕಾನೂನಿನ ಮೂಲಕ ಸ್ತಿರಾಸ್ತಿಯನ್ನು ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆನಿರೀಕ್ಷಿಸಿದ್ದ ಯಶಸ್ಸು ಖಂಡಿತ ಇರುತ್ತದೆ. ಕೆಲಸ ಕಾರ್ಯಗಳನ್ನು ಮಾಡುವಾಗ ಸಣ್ಣ ಪುಟ್ಟ ಗಾಯಗಳಾಗಬಹುದು ಎಚ್ಚರವಹಿಸಿರಿ. ಸಂಗಾತಿಯಿಂದ ಧನಹಾಯ ಖಂಡಿತ ದೊರೆಯುತ್ತದೆ. ವ್ಯವಹಾರಗಳನ್ನು ವಿಸ್ತರಿಸಲು ನೆರ ವಾಗುವರು. ನವೀನರೀತಿಯ ಕೃಷಿಉಪಕರಣಗಳನ್ನು ಮಾರುವವರಿಗೆ ಲಾಭವಿರುತ್ತದೆ.ಬಂಧುಗಳ ವಕ್ರದೃಷ್ಟಿ ನಿಮ್ಮಮೇಲೆ ಬೀಳಬಹುದು. ಹಿರಿಯರಿಂದ ದೈವವಿದ್ಯೆ ಯನ್ನು ಕಲಿಯಬಹುದು. ವೃತ್ತಿಯಲ್ಲಿಯಾವುದೇ ವ್ಯತ್ಯಾಸವಿರುವುದಿಲ್ಲ.
ಮಕರ
ಶ್ರದ್ಧೆಯಿಂದ ಕೆಲಸ ಮಾಡುವಿರಿ. ಇದು ನಿಮಗೂ ಹಾಗೂ ಸಂಸ್ಥೆಗೂ ಒಳ್ಳೆಯದನ್ನು ಮಾಡುತ್ತದೆ. ಧನಾ ದಾಯವು ಕಡಿಮೆ ಇದ್ದರೂ ಅದನ್ನು ಸರಿಯಾಗಿ ನಿರ್ವಹಣೆ ಮಾಡುವಿರಿ. ಹಿರಿಯರೊಡನೆ ವಿನಾಕಾರಣ ಘರ್ಷಣೆ ಮಾಡಿಕೊಳ್ಳುವುದು ಬೇಡ. ಅತಿ ಕಠಿಣವಾದ ಮಾತುಗಳು ಯಾರೊಂದಿಗೂ ಬೇಡ. ಆಸ್ತಿ ಮಾಡಲು ಸಕಾಲವಾಗಿದೆ, ಅದಕ್ಕೆ ಪೂರಕವಾಗಿ ಧನಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ವಾಯು ಪ್ರಕೋಪ ನಿಮ್ಮನ್ನು ಕಾಡಬಹುದು. ಸಂಗಾತಿಯ ಸಲಹೆಯಿಂದ ವ್ಯವಹಾರಗಳಲ್ಲಿ ಲಾಭವಾಗುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿಸಿದ್ದ ಯಶಸ್ಸು ದೊರೆಯದಿರಬಹುದು. ವ್ಯವಹಾರಗಳಲ್ಲಿ ಅನಿರೀಕ್ಷಿತ ತಿರುವುಗಳು ಬಂದರೂ ನಷ್ಟವಿರುವುದಿಲ್ಲ. ಧರ್ಮವಿದ್ಯೆಯನ್ನು ಕಲಿಯಲು ಅವಕಾಶಗಳು ದೊರೆಯುತ್ತವೆ. ವೃತ್ತಿಯಲ್ಲಿ ಏರಿಳಿತ ಇರುವುದಿಲ್ಲ.
ಕುಂಭ
ಮನಸ್ಸಿನಲ್ಲಿ ವಿರೊಧಾಭಾಸಗಳಿರುತ್ತವೆ. ಮಾತನಾಡುವಾಗ ಜಾಣ್ಮೆಯಿಂದ ಮಾತನಾಡಿರಿ. ಹಿರಿಯರು ನಿಮ್ಮ ನಡವಳಿಕೆ ನೋಡಿ ನಂತರ ಸಹಾಯ ಮಾಡುವರು. ಈ ರಾಶಿಯ ಹಿರಿಯರಿಗೆ ಉತ್ತಮವಾದ ಗೌರವ ದೊರೆಯುವಸಾಧ್ಯತೆ ಇದೆ. ಕುಟುಂಬದಲ್ಲಿ ಸೌಖ್ಯವಿದ್ದರೂ ದಾಯಾದಿಗಳ ನಡುವೆ ಕ್ಲೇಶ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮ ಹಾಕಿ ಹೆಚ್ಚಿನ ಫಲಿತಾಂಶವನ್ನು ಪಡೆಯುವ ಯೋಗವಿದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಸಂಗಾತಿಯ ಸಹಕಾರದಿಂದ ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುತ್ತದೆ.ಹೈನುಗಾ ರಿಕೆಯನ್ನು ಮಾಡುವವರಿಗೆ ಸ್ವಲ್ಪ ಚೇತರಿಕೆಕಾಣುತ್ತದೆ. ಉಪಾಧ್ಯಾಯರುಗಳಿಗೆ ಹೆಚ್ಚಿನಸ್ಥಾನ ಸಿಗುವ ಸಾಧ್ಯತೆ ಇದೆ. ಗಣಿಗಾರಿಕೆಯನ್ನು ಮಾಡುವವರಿಗೆ ಅನಿರೀಕ್ಷಿತ ಆದಾಯಗಳಿರುತ್ತವೆ ಮತ್ತು ಇದ್ದ ನಿರ್ಬಂಧಗಳು ತೆರವಾಗುತ್ತವೆ.
ಮೀನ
ಎಲ್ಲಾ ಜಾಗಗಳಲ್ಲೂ ನೀವೇ ಹಿರಿಯರಂತೆ ವರ್ತಿಸುವಿರಿ, ನಿಮ್ಮ ಕೆಲವು ಬಂಧುಗಳು ನಿಮ್ಮಿಂದ ದೂರವಾಗುವರು. ಬಣ್ಣ ಬಣ್ಣದ ಮಾತನಾಡಿ ನಿಮ್ಮ ಕೆಲಸ ಕಾರ್ಯಗಳನ್ನು ಇತರರಿಂದ ಮಾಡಿಸಿಕೊಳ್ಳುವಿರಿ. ಧನಾದಾಯವು ನಿರೀಕ್ಷೆಯಷ್ಟಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ದ್ವಂದ್ವ ನಿಲುವುಗಳನ್ನು ತಾಳುವಿರಿ. ನಿಮ್ಮ ಒಡಹುಟ್ಟಿದವರ ಸಂಗಡ ನಿಷ್ಠುರಗಳನ್ನು ಕಟ್ಟಿಕೊಳ್ಳುವಿರಿ. ಆಸ್ತಿಗಾಗಿ ಹಣ ಹೂಡಿಕೆ ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವರಸೌಕರ್ಯಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ವಾಯು ಸಂಬಂಧದಿಂದ ಕೆಲವರಿಗೆ ಎದೆ ನೋವು ಕಾಣಿಸಿಕೊಳ್ಳಬಹುದು. ನ್ಯಾಯಾಧೀಶರಿಗೆ ಸಂದಿಗ್ದ ಪರಿಸ್ಥಿತಿಗಳು ಎದುರಾಗುವ ಸಂದರ್ಭವಿದೆ. ವೃತ್ತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ವೇತನ ಹೆಚ್ಚಳದ ಸಾಧ್ಯತೆ ಇದೆ. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.