ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗೆ ಹೆಚ್ಚು ನಂಬಿಕೆ ಇರಲಿ
Published 10 ಫೆಬ್ರುವರಿ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
(ಅಶ್ವಿನಿ ಭರಣಿ ಕೃತಿಕ 1) ನಿಮ್ಮ ಕೆಲವು ನಿಲುವುಗಳಿಂದ ನಿಮಗೆ ಅಪಖ್ಯಾತಿ ಬರುವ ಸಾಧ್ಯತೆ ಇದೆ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆಗ ಳಿಂದ ವೃತ್ತಿಯಲ್ಲಿ ಕೆಲವು ಅನುಕೂಲ ಮತ್ತು ಅನಾನು ಕೂಲಗಳನ್ನು ನೀವೇ ಸೃಷ್ಟಿಮಾಡಿಕೊಳ್ಳುವಿರಿ. ನಿಮ್ಮ ಸ್ತಿರಾಸ್ತಿಯ ವಿಷಯದಲ್ಲಿ ತಣ್ಣಗಿದ್ದ ತಗಾದೆಗಳು ಜಾಸ್ತಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರದ್ಧೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ನಿಮ್ಮ ಸಂಗಾತಿಯ ಸಂತೋಷಕ್ಕಾಗಿ ಆಭರಣಗಳನ್ನುಖರೀದಿಮಾಡುವಿರಿ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ವ್ಯವಹಾರ ಚೆನ್ನಾಗಿ ನಡೆಯುತ್ತದೆ.ಉದ್ಯೋಗದಸ್ಥಳದಲ್ಲಿಉತ್ತಮ ಹೆಸರು ಬರುವಸಾಧ್ಯತೆ ಇದೆ. ಕಬ್ಬಿಣದ ವಸ್ತುಗಳ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಬರುತ್ತದೆ. ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.ರಾಜಕಾರಣಿಗಳ ಹಿಂಬಾಲಕರಿಗೆ ಅವರ ನಾಯಕರುಗಳ ಮೂಲಕ ಕೆಲವು ಕೆಲಸಗಳು ಆಗುವ ಲಕ್ಷಣಗಳಿವೆ.
ವೃಷಭ
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ವೈಯಕ್ತಿಕ ವರ್ಚಸ್ಸು ಕಡಿಮೆಯಾದಂತೆ ಅನಿಸಬಹುದು. ಧನಾದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ನಿಮ್ಮ ನಡವಳಿಕೆ ಬಹಳ ಚುರುಕಾಗಿದ್ದು ಸಂಪಾದನೆಯತ್ತ ಕೇಂದ್ರೀಕೃತವಾಗಿರುತ್ತದೆ.ಹಿರಿಯರು ಸಂಸಾರದಲ್ಲಿ ಶಾಂತಿ ನೆಲೆಸುವಂತೆ ಮಾಡುವರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸ್ವಲ್ಪಕಡಿಮೆ ಇರು ತ್ತದೆ. ಸ್ತ್ರೀಯರಿಗೆ ಕೊಟ್ಟ ಹಣಗಳು ವಾಪಸ್ ಬರುವ ಸಾಧ್ಯತೆ ಕಡಿಮೆಇರುತ್ತದೆ. ಕೃಷಿಯಿಂದಹೆಚ್ಚುಆದಾಯ ಬರುವಸಾಧ್ಯತೆ ಇದೆ. ಸಂಗಾತಿಗೆಹಿರಿಯರಿಂದಭೂಮಿ ದೊರೆಯುವ ಸಾಧ್ಯತೆಗಳಿವೆ. ನವೀನ ರೀತಿಯ ಕೃಷಿ ಯನ್ನು ಮಾಡುವವರಿಗೆ ಸೂಕ್ತ ಸಲಹೆಗಳು ಮತ್ತು ಸೌಲಭ್ಯಗಳು ದೊರೆಯುತ್ತವೆ. ತಂದೆಯು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ನಿಮಗು ಸ್ಥಾನ ಸಿಗುತ್ತದೆ. ವಿದೇಶಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಅಧಿಕ ಲಾಭವಿರುತ್ತದೆ. ರಾಜಕೀಯವನ್ನು ವೃತ್ತಿಯಾಗಿ ಮಾಡಿಕೊಂಡವರಿಗೆ ಹೊಸ ಆದಾಯದ ಮೂಲಗಳು ದೊರೆಯುತ್ತವೆ.
ಮಿಥುನ
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ವಾರದ ಆರಂಭದಲ್ಲಿ ಯಶಸ್ವಿಯಾಗಿ ಎಲ್ಲಾ ಕೆಲಸಗಳು ಆರಂಭಗೊಂಡರು ನಂತರ ಬಂಧುಗಳಿಂದ ಸ್ವಲ್ಪಅಡ್ಡಿ ಆಗುತ್ತದೆ. ನಿಮಗಅರಿವಿಲ್ಲದೆನಿಮ್ಮಮಾತು ಕಠಿಣವಾಗಬಹುದು ಹಾಗಾಗಿ ಮಾತಿನ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸೌಕರ್ಯ ದೊರೆಯುವ ಸಂಭವ ಬಂದರು ಸಹ ಕೆಲ ವೊಂದು ನಿಲ್ಲಬಹುದು. ಸ್ವಂತಜಮೀನನ್ನು ಅಭಿವೃದ್ಧಿ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಹತ್ತಿರ ಫಲಿತಾಂಶ ಬರುವ ಸಾಧ್ಯತೆಗಳಿವೆ. ಸರ್ಕಾರಿ ಜಮೀನುಗಳನ್ನು ವಶ ಮಾಡಿಕೊಂಡಿರುವವರಿಗೆ ಈಗ ಕಾನೂನು ತಕರಾರುಗಳು ತಲೆದೋರುವಸಾಧ್ಯತೆಗಳು ಕಾಣುತ್ತಿವೆ. ಸಂಗಾತಿಯಿಂದ ನಿಮ್ಮ ಕೆಲಸ ಕಾರ್ಯ ಗಳಿಗೆ ಧನಸಹಾಯ ಸಿಗುವ ಸಾಧ್ಯತೆ ಇದೆ. ವಿದೇಶ ದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಈಗ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಶಿಕ್ಷಣಸಂಸ್ಥೆ ಗಳನ್ನು ನಡೆಸುತ್ತಿರುವವರಿಗೆ ಅನುಕೂಲವಾಗುತ್ತದೆ.
ಕರ್ಕಾಟಕ
(ಪುನರ್ವಸು 4 ಪುಷ್ಯ ಆಶ್ಲೇಷ) ಮೈಯಲ್ಲಿ ಹಾಗೂ ಮನಸ್ಸಿನಲ್ಲಿ ಸ್ವಲ್ಪ ಆಲಸಿತನ ಇರುತ್ತದೆ. ಸರ್ಕಾರಿ ಸಹಾಯಧನಗಳು ಈಗ ಬರುವ ಸೂಚನೆಗಳಿವೆ. ಸೈನಿಕರು ನಿರೀಕ್ಷಿಸುತ್ತಿದ್ದ ಸವಲತ್ತುಗಳು ಈಗ ದೊರೆಯುತ್ತವೆ. ತಾವು ಪಟ್ಟ ಶ್ರಮಕ್ಕೆ ಕೃಷಿಕರಿಗೆ ಉತ್ತಮ ಬೆಲೆ ಬರುತ್ತದೆ. ಸಂಗಾತಿ ಯಿಂದ ನಿಮಗೆ ಧನಸಹಾಯ ದೊರೆಯಬಹುದು. ಕ್ರೀಡಾ ವಿದ್ಯಾರ್ಥಿಗಳಿಗೆ ಕಲಿಯಲು ಉತ್ತಮ ಶಾಲಾ ವ್ಯವಸ್ಥೆ ಉತ್ತಮ ಗುರುಗಳು ದೊರಕುವರು. ಆಭರಣ ಗಳ ತಯಾರಕರಿಗೆ ಸ್ವಲ್ಪಮಟ್ಟಿಗೆ ತಯಾರಿಕಾ ಆದೇಶ ಗಳು ಕಡಿಮೆಯಾಗುವ ಸಾಧ್ಯತೆಗಳಿವೆ. ಸಂಗಾತಿ ಕಡೆ ಯವರ ವ್ಯವಹಾರಗಳಲ್ಲಿ ನಿಮಗೆ ಪಾಲು ದೊರೆಯು ತ್ತದೆ. ಕೆಲವು ರಾಜಕಾರಣಿಗಳಿಗೆ ಅನಿರೀಕ್ಷಿತ ತಿರುವು ಗಳು ಬಂದು ಒಂದು ಸೂಕ್ತ ಸ್ಥಾನ ಸಿಗುವ ಸಾಧ್ಯತೆ ಇದೆ. ವಿದೇಶಗಳಿಗೆ ಸಿದ್ಧಪಡಿಸಿದಆಹಾರವಸ್ತುಗಳನ್ನು ರಫ್ತು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ.
ಸಿಂಹ
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗೆ ಹೆಚ್ಚು ನಂಬಿಕೆ ಇರಲಿ. ಇದು ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರು ತ್ತದೆ. ನಿಮ್ಮ ನಡವಳಿಕೆ ಹೆಚ್ಚು ಹಣ ಸಂಪಾದನೆ ಮಾಡುವ ಕಡೆಗೆ ಇರುತ್ತದೆ. ಸ್ತ್ರೀಯರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಕೃಷಿಯಿಂದ ಬರುವ ಆದಾಯ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ತೆಗಳು ದೊರೆಯುತ್ತವೆ. ಸಾಲಗಾರರು ಹಣ ವಸೂಲಿ ಮಾಡಲು ಬರಬಹುದು.ಸರ್ಕಾರಿ ಶಾಲೆಗಳು ಅಥವಾ ಸಂಸ್ಥೆಗಳಸಾಲಗಳು ಬಹಳದುಬಾರಿಯಾಗಬಹುದು. ಸಂಗಾತಿಯಿಂದ ನಿರೀಕ್ಷಿತ ಮಟ್ಟದ ಸಹಕಾರಗಳು ದೊರೆಯುವುದಿಲ್ಲ. ವಿದೇಶಿ ವ್ಯವಹಾರ ಮಾಡುವವ ರಿಗೆ ಸ್ವಲ್ಪ ಆರ್ಥಿಕ ಮುಗ್ಗಟ್ಟು ಎದರಾಗಬಹುದು.
ಕನ್ಯಾ
(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಮೂಡುತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ನಟನೆ ಮಾಡುವವರಿಗೆ ಹೆಚ್ಚುಅವಕಾಶಗಳುದೊರೆತು ಸಂಪಾದನೆಯಾಗುತ್ತದೆ. ಬಂಧುಗಳ ನಡುವೆ ಹಳ ಸಿದ್ದ ಸಂಬಂಧಗಳನ್ನು ಸುಧಾರಿಸಲು ಯತ್ನಮಾಡು ವಿರಿ. ಭೂಮಿ ವ್ಯಾಪಾರವನ್ನು ಮಾಡುವವರಿಗೆ ಉತ್ತಮ ಸಂಪಾದನೆ ಇರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಕೃಷಿ ವಿದ್ಯೆಯನ್ನು ಓದುತ್ತಿರುವ ವರಿಗೆ ಉತ್ತಮ ಫಲಿತಾಂಶ ದೊರೆ ಯುವ ಸಾಧ್ಯತೆ ಇದೆ. ಮಾನಸಿಕ ರೋಗಿಗಳು ಹೆಚ್ಚು ಎಚ್ಚರದಿಂದಿರ ಬೇಕು. ಸಂಗಾತಿ ನಡೆಸುವ ವ್ಯವಹಾರ ಗಳಲ್ಲಿ ಸ್ವಲ್ಪಆದಾಯ ಹೆಚ್ಚುತ್ತದೆ. ನಿಮಗೆ ಬರಬೇಕಿದ್ದ ಹಣಗಳು ಬರುವುದು ತಡವಾಗಬಹುದು. ಕೆಲವರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣಕಾಸುಗಳು ದೊರೆಯಬಹುದು. ವೃತ್ತಿಯಲ್ಲಿ ಸಾಕಷ್ಟು ಗೊಂದಲಮಯ ವಾತಾವರಣ ಇರುತ್ತದೆ. ಹಾಲಿನ ಉತ್ಪನ್ನ ಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ವಿರುತ್ತದೆ.
ತುಲಾ
(ಚಿತ್ತಾ 3 4 ಸ್ವಾತಿ ವಿಶಾಖ 1 2 3) ನಿಮ್ಮ ವೈಯಕ್ತಿಕ ಗೌರವವನ್ನು ಬಹಳ ಅಪೇಕ್ಷೆ ಪಡುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬಹಳ ಚುರುಕಾಗಿ ಮಾತನಾಡಿ ಎಲ್ಲರ ಗಮನ ಸೆಳೆಯುವಿರಿ. ನಿಮ್ಮ ಆಸ್ತಿಯ ದಾಖಲೆಗಳಲ್ಲಿ ಇದ್ದಗೊಂದಲಗಳು ಈಗಸರಿಯಾಗುತ್ತವೆ. ಮಕ್ಕಳಿಂದ ಗೌರವ ಬರುವುದಕ್ಕಿಂತ ಅಗೌರವ ಬರುವ ಸಾಧ್ಯತೆ ಇದೆ. ಮೂಳೆ ತಜ್ಞರಿಗೆ ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಗಳಿವೆ ತನ್ಮೂಲಕ ಅವರಆದಾಯಹೆಚ್ಚುತ್ತದೆ.ಸಂಗಾತಿ ಕಡೆಯವರಿಂದ ನಿಮಗೆ ನಿರೀಕ್ಷಿತಸಹಾಯ ದೊರೆಯು ತ್ತದೆ. ಆಭರಣ ತಯಾರಕರಿಗೆ ಅನಿರೀಕ್ಷಿತ ಲಾಭಗಳು ಇರುತ್ತದೆ. ಸರ್ಕಾರಿಸಂಸ್ಥೆಗಳ ಜೊತೆಗೆಮಾಡುವ ವ್ಯವ ಹಾರಗಳಲ್ಲಿ ಮಂದಗತಿಯಪ್ರಗತಿಇರುತ್ತದೆ. ಹಿರಿಯರ ಸಹಕಾರಗಳಿಂದ ನಿಮ್ಮ ಕೆಲವುಕೆಲಸಗಳುಸಂಪೂರ್ಣ ಮುಗಿಯಲು ಸಹಾಯವಾಗುತ್ತದೆ.ವೃತ್ತಿಯಲ್ಲಿ ಹಿತ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ.
ವೃಶ್ಚಿಕ
(ವಿಶಾಖಾ 4 ಅನುರಾಧ ಜೇಷ್ಠ) ಕೃಷಿ ಉತ್ಪಾದನೆಗಳನ್ನು ಮಾರಾಟ ಮಾಡಲು ಮುನ್ನುಗ್ಗುವಿರಿ. ಆದರೆ ಅತಿಯಾದ ಬಂಡವಾಳವನ್ನು ತೊಡಗಿಸುವುದು ಬೇಡ.ಧನಾದಾಯವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಸೈನಿಕರಿಗೆ ಮೇಲ್ದರ್ಜೆಯ ಹುದ್ದೆಗೆ ಬಡ್ತಿದೊರೆಯುವ ಸಂದರ್ಭವಿದೆ. ಮಿಲಿಟರಿ ಸಂಸ್ಥೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವವ ರಿಗೆ ಹೆಚ್ಚಿನ ಪೂರೈಕೆ ಆದೇಶಗಳು ದೊರೆಯುತ್ತವೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚು ಬೆಲೆ ಬರುತ್ತದೆ. ಸಾಂಪ್ರದಾಯಿಕ ಬೀಜೋತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ವೈಮಾನಿಕ ತರಬೇತಿ ಸಂಸ್ಥೆಗಳಿಗೆ ಆದಾಯ ಹೆಚ್ಚುತ್ತದೆ. ವೆಚ್ಚದ ಮೇಲೆ ನಿಗಾ ಇಡದಿದ್ದಲ್ಲಿ ಆರ್ಥಿಕ ಪರಿಸ್ಥಿತಿ ವ್ಯತ್ಯಾಸ ವಾಗಬಹುದು. ಅದಿರು ಗಣಿಗಾರಿಕೆ ಮಾಡುವವರಿಗೆ ಸರ್ಕಾರದಿಂದ ಬರಬೇಕಾಗಿದ್ದ ದಾಖಲಾತಿಗಳು ಬರುತ್ತವೆ. ತಾಯಿಯ ಜೊತೆ ಸ್ವಲ್ಪ ಮಾತುಗಳಾದರು ಅವರು ನಿಮಗೆ ಸಹ ಕಾರ ನೀಡುವರು.
ಧನು
(ಮೂಲ ಪೂರ್ವಾಷಾಢ ಉತ್ತರಾಷಾಢ 1 ) , ಸ್ತ್ರೀಯರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸರ್ಕಾರಿ ಸಂಸ್ಥೆಗಳಿಂದ ಬರಬೇಕಾಗಿದ್ದ ಬಾಕಿಹಣಗಳು ಈಗ ಬರುತ್ತವೆ. ಕೃಷಿಯಿಂದ ಆದಾಯ ಹೆಚ್ಚುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟಮಾಡುವವರಿಗೆ ಹೆಚ್ಚು ವ್ಯವಹಾರ ನಡೆಯುತ್ತದೆ. ಬಹಳ ಸೂಕ್ಷ್ಮವಾಗಿ ನಿಮ್ಮ ವೈರಿಗಳ ಬಾಲ ಕತ್ತರಿಸುವಿರಿ. ವಿದೇಶಿ ಕಂಪನಿಗಳಿಗೆ ಇಲ್ಲಿ ಭೂಮಿ ಒದಗಿಸುವವರಿಗೆ ಹೆಚ್ಚುಆದಾಯ ಇರು ತ್ತದೆ. ನವೀನರೀತಿಯ ಕೃಷಿಕರಿಗೆ ಬೇಕಾದ ಸೌಲಭ್ಯ ಗಳು ದೊರೆಯುತ್ತವೆ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚಿನ ಯಶಸ್ಸು ದೊರೆಯು ತ್ತದೆ. ನಿಲ್ಲಿಸಿದ್ದ ವಿದ್ಯೆಗಳನ್ನು ಈಗ ಮುಂದುವರೆಸಬ ಹುದು. ಮಹಿಳಾ ವೈದ್ಯರುಗಳಿಗೆ ಆದಾಯ ಕಡಿಮೆ ಯಾಗಬಹುದು. ಸಂಗಾತಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ತಂದೆಯಿಂದ ನಿಮಗೆ ನಿರೀಕ್ಷಿತ ಸಹಕಾರ ಸೌಲಭ್ಯಗಳು ದೊರೆಯುತ್ತವೆ. ವೃತ್ತಿಯಲ್ಲಿ ಯಾವುದೇ ಏರಿಳಿತವಿರುವುದಿಲ್ಲ.
ಮಕರ
(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ದೊರೆಯುವ ಸಾಧ್ಯತೆ ಇದೆ. ಕೆಲವು ಕ್ರೀಡಾಪಟುಗಳಿಗೆ ಕ್ರೀಡಾಸಂಸ್ಥೆಗಳ ಮುಖ್ಯಸ್ಥರಾಗುವ ಯೋಗವಿದೆ. ಧನಾದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು.ವಿದೇಶಕ್ಕೆ ಹೋಗಬೇಕೆನ್ನುವರ ಕೆಲವರ ಕನಸು ನನಸಾಗಬಹುದು. ಆಸ್ತಿ ಕೊಳ್ಳುವಿಕೆ ವಿಚಾರ ದಲ್ಲಿ ಈಗ ಮುಂದುವರಿಯಬಹುದು.ವಿದ್ಯಾರ್ಥಿಗಳಿಗೆ ಸಾಮಾನ್ಯ ಮಟ್ಟದ ಫಲಿತಾಂಶ ಇರುತ್ತದೆ. ತೀವ್ರ ನರ ದೌರ್ಬಲ್ಯ ಇರುವವರು ಹೆಚ್ಚು ಎಚ್ಚರಿಕೆ ವಹಿಸಿರಿ. ಸಂಗಾತಿಯ ಸಹಕಾರದಿಂದ ಆದಾಯದಲ್ಲಿ ಹೆಚ್ಚಳ ವನ್ನು ಕಾಣುವಿರಿ. ಕಟ್ಟಡ ನಿರ್ಮಾಣ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ನಿಧಾನವಾಗ ಬಹುದು. ಸಂಗಾತಿಯ ಸಹಕಾರಗಳು ಕೆಲವೊಮ್ಮೆ ಸಿಗದೇ ಇರಬಹುದು. ಮೀನುಗಾರಿಕೆ ಮಾಡುವವರಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಅನಿರೀಕ್ಷಿತವಾಗಿ ಕೆಲವರಿಗೆ ಮಂತ್ರೋಪದೇಶಗಳು ಆಗಬಹುದು.
ಕುಂಭ
(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಮನಸ್ಸು ದ್ವಂದ್ವದಿಂದ ಕೂಡಿದ್ದರೂ ಸ್ಥಿತಪ್ರಜ್ಞರಾಗಿರುವುದು ಒಳ್ಳೆಯದು. ವಿದೇಶಿ ಹಣ ಬದಲಾವಣೆ ಮಾಡುವವರಿಗೆ ಹೆಚ್ಚಿನಲಾಭ ಇರುತ್ತದೆ. ಉತ್ತಮ ಕೆಲಸಗಳಿಗೆ ಹಿರಿಯರ ಸಹಕಾರ ದೊರೆಯು ತ್ತದೆ. ಕೆಲವು ಹಿರಿಯರಿಗೆ ದೊಡ್ಡ ಗುರುಗಳ ಭೇಟಿ ಯಾಗುವ ಸಂದರ್ಭವಿದೆ. ನವೀನ ರೀತಿಯ ಹಣ್ಣು ತರಕಾರಿಗಳನ್ನು ಬೆಳೆಯುವವರಿಗೆ ಮಾರುಕಟ್ಟೆ ವಿಸ್ತ ರಿಸುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಇರುತ್ತದೆ. ಶೀತಭಾದೇ ಕೆಲವರಿಗೆ ಉಲ್ಬಣ ಆಗುವ ಸಾಧ್ಯತೆಗಳಿವೆ. ಸಂಗಾತಿಯ ಮಧ್ಯ ಪ್ರವೇಶದಿಂದ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು. ಕಟ್ಟಡ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಮತ್ತು ಲಾಭವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಯುವಕರಲ್ಲಿ ಧರ್ಮಶ್ರದ್ಧೆ ಕಡಿಮೆಯಾಗಬಹುದು.
ಮೀನ
(ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ನಿಮ್ಮ ತಳುಕಿನ ಮಾತಿಗೆ ಕೆಲವು ಜನರು ಬೆರಗಾಗುವರು. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ.ಭಾಷಣಕಾರರಿಗೆ ಉತ್ತಮವೇದಿಕೆ ದೊರೆ ಯುತ್ತದೆ. ವೃತ್ತಿಯಲ್ಲಿ ನಿಮ್ಮ ಅಭಿವೃದ್ಧಿಗಾಗಿ ಹಿರಿಯ ಅಧಿಕಾರಿಗಳನ್ನು ಬಹಳ ಓಲೈಸುವಿರಿ. ಸೋದರಿಯರ ಸಹಕಾರ ನಿಮಗೆದೊರೆಯುತ್ತದೆ.ವ್ಯಾಪಾರವ್ಯವಹಾರ ಗಳಲ್ಲಿ ನಿಮ್ಮದೇ ಮಾತುಗಳು ನಡೆಯಬೇಕೆಂದು ಹಠ ಹಿಡಿದು ನಿಮ್ಮ ಸ್ಥಾನಕ್ಕೆ ಕುತ್ತು ತಂದುಕೊಳ್ಳುವಿರಿ.ಆಸ್ತಿ ವ್ಯವಹಾರಮಾಡುವವರಿಗೆ ಹೆಚ್ಚುಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಕಡಿಮೆ ಯಶಸ್ಸು ಇರುತ್ತದೆ. ಅನುವಂಶಿಯ ಕಾಯಿಲೆಗಳು ಕೆಲವರಿಗೆ ಹೊರಹೊಮ್ಮಬಹುದು. ಸಂಗಾತಿಮಾಡುವಧಾರ್ಮಿಕ ಕಾರ್ಯಗಳಲ್ಲಿ ನೀವು ಉಪೇಕ್ಷೆಗೆ ಒಳಗಾಗುವಿರಿ. ಸಹೋದ್ಯೋಗಿಗಳು ಅಥವಾ ಗೆಳೆಯರು ನಿಮ್ಮಿಂದ ದೂರವಾಗುವ ಸಂದರ್ಭವಿದೆ. ಹಿರಿಯರಿಂದ ಕೃಷಿ ಭೂಮಿ ದೊರೆಯಬಹುದು.