ಚೆನ್ನೈ: ಮುಖ್ಯ ನ್ಯಾಯಮೂರ್ತಿಸಂಜೀಬ್ ಬ್ಯಾನರ್ಜಿ ಅವರನ್ನು ಮೇಘಾಲಯ ಹೈಕೋರ್ಟ್ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಗೆಮದ್ರಾಸ್ ಹೈಕೋರ್ಟ್ ವಕೀಲರು ವಿರೋಧ ವ್ಯಕ್ತಪಡಿಸಿದ್ದು,ಈ ಸಂಬಂಧ ಸಿಜೆಐಗೆ ಪತ್ರ ಬರೆದಿದ್ದಾರೆ.
ಸಿಜೆ ಬ್ಯಾನರ್ಜಿ ಅವರನ್ನು ವರ್ಗಾವಣೆ ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ 200ಕ್ಕೂ ಹೆಚ್ಚು ವಕೀಲರು ಸಹಿ ಹಾಕಿದ ಪತ್ರವನ್ನು ಸಿಜೆಐ ಎನ್.ವಿ.ರಮಣ ಮತ್ತುಸುಪ್ರೀಂ ಕೋರ್ಟ್ನ ಕೊಲಿಜಿಯಂಗೆ ಕಳುಹಿಸಲಾಗಿದೆ.
‘ವರ್ಗಾವಣೆ ನಿರ್ಧಾರವು ಪ್ರಾಮಾಣಿಕ ಮತ್ತು ನಿರ್ಭೀತಿಯಿಂದ ನಿರ್ಧಾರ ತೆಗೆದುಕೊಳ್ಳುವನ್ಯಾಯಾಧೀಶರ ವಿರುದ್ಧದ ದಂಡದ ಕ್ರಮವಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.