‘ಕಂಪನಿಯ ನಿರ್ದೇಶಕರಾದ ರಾಶ್ಪಾಲ್ ಸಿಂಗ್ ಟಾಡ್, ಮಾಂಧೀರ್ ಸಿಂಗ್ ಟಾಡ್ ಮತ್ತು ಅದರ ಸಿಎಫ್ಒ ವೈಭವ್ ಶರ್ಮಾ ತಮ್ಮ ಬ್ಯಾಂಕಿಗೆ ₹ 102 ಕೋಟಿ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾಗಿದ್ದ ಬ್ಯಾಂಕ್ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ತನಿಖೆ ಕೈಗೊಂಡಾಗ ವೈಭವ್ ಮತ್ತು ಆತನ ಕಂಪನಿಯ ನಿರ್ದೇಶಕರು ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆದ ₹ 300 ಕೋಟಿಯನ್ನು ದುರುಪಯೋಗಪಡಿಸಿಕೊಂಡಿರುವುದು ತಿಳಿದು ಬಂದಿದೆ’ ಎಂದು ಪೊಲೀಸರು ವಿವರಿಸಿದ್ದಾರೆ.