ಸಂಘವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಜನರು ಅಲ್ಪಾವಧಿಗಾದರೂ ಸಂಘವನ್ನು ಸೇರಬೇಕು ಎಂದು ಭಾಗವತ್ ಅಭಿಪ್ರಾಯಪಟ್ಟರು. ‘ಸಂಘವನ್ನು ಸೇರಿದರೆ ನಮಗೇನು ಸಿಗುತ್ತದೆ ಎಂದು ಯಾರಾದರೂ ಪ್ರಶ್ನಿಸಿದರೆ, ನನ್ನ ಉತ್ತರ ಏನೂ ಇಲ್ಲ. ಅಕಸ್ಮಾತ್ ಏನಾದರೂ ಸಿಕ್ಕರೂ ಅದು ಮರಳಿ ಸಮಾಜಕ್ಕೆ ಹೋಗುತ್ತದೆ. ಧೈರ್ಯವಿದ್ದರೆ ಅವರು ಬರಬಹುದು. ಸ್ವಾರ್ಥಿಗಳು ದೂರವೇ ಉಳಿದರೂ ಅವರಿಗೂ, ಸಂಘಕ್ಕೂ ಒಳ್ಳೆಯದು’ ಎಂದು ಹೇಳಿದರು.