ಮುಜಾಫರ್ನಗರ(ಉತ್ತರಪ್ರದೇಶ): ಇಲ್ಲಿನ ಲಖನ್ ಗ್ರಾಮದಲ್ಲಿ ಮದುವೆ ಗಂಡು ತನಗೆ ವರದಕ್ಷಿಣೆಯಾಗಿ ಲಭಿಸಿದ್ದ ₹11ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮದುಮಗ ಸೌರಭ್ ಚೌಹಾಣ್ ಅವರು ವರದಕ್ಷಿಣೆಗೆ ಬದಲಾಗಿ ₹1 ಅನ್ನು ‘ಶಗುನ್’ ಆಗಿ ಪಡೆದುಕೊಂಡಿದ್ದಾರೆ.
ಸೌರಭ್ ಅವರು ಕಂದಾಯ ಅಧಿಕಾರಿಯಾಗಿದ್ದಾರೆ (ಲೋಕಪಾಲ್). ವಧು ಪ್ರಿನ್ಸ್ ಅವರು ನಿವೃತ್ತ ಯೋಧರ ಪುತ್ರಿಯಾಗಿದ್ದಾರೆ.
‘ಮದುಮಗನ ನಡೆ ಎಲ್ಲರಿಗೂ ಮಾದರಿಯಾಗಲಿ’ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.