ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿದ್ದಾಗ ತುಕಾರಾಂ ಅವರ ಅಭಂಗ ಹಾಡುತ್ತಿದ್ದ ಸಾವರ್ಕರ್: ಮೋದಿ

ತುಕಾರಾಂ ಅವರ ಶಿಲಾ ದೇಗುಲ ಉದ್ಘಾಟನೆ ವೇಳೆ ಮೋದಿ
Last Updated 14 ಜೂನ್ 2022, 11:14 IST
ಅಕ್ಷರ ಗಾತ್ರ

ದೇಹೂ: ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವೇಳೆ ಸಂತ ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ದೇಹೂನಲ್ಲಿ ಮಂಗಳವಾರ 17ನೇ ಶತಮಾನದ ಸಂತ ತುಕಾರಾಂ ಅವರ ಶಿಲಾ ದೇವಸ್ಥಾನ ಉದ್ಘಾಟಿಸಿದಅವರುಪಂಢರಪುರದ ವಿಠಲ ಮಂದಿರ ತೀರ್ಥಯಾತ್ರೆ ಕೈಗೊಂಡ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ‘ವೀರ ಸಾವರ್ಕರ್ ಅವರು ಜೈಲಿನಲ್ಲಿದ್ದಾಗ ತಮಗೆ ತೊಡಿಸಿದ್ದ ಕೈಕೋಳಗಳನ್ನು ಸಂಗೀತ ವಾದ್ಯಗಳ ರೀತಿ ಬಳಸಿಕೊಂಡು, ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು’ ಎಂದರು.

ಈ ವೇಳೆ ಮೋದಿ ಅವರಿಗೆ ತುಕಾರಾಂ ಪಗಡಿ ತೊಡಿಸಿ ಗೌರವಿಸಲಾಯಿತು.ತುಕಾರಾಂ ಅವರು ಭಕ್ತಿ ಚಳವಳಿಯಲ್ಲಿ ಪ್ರಮುಖರಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಅವರಂತಹ ನಾಯಕರ ಜೀವನದಲ್ಲಿ ತುಕಾರಾಂ ಅವರು ಮುಖ್ಯ ಪಾತ್ರ ವಹಿಸಿದ್ದರು ಎಂದು ಕೊಂಡಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT