ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿರುವ ಎನ್ಎಸ್ಯುಐನ ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ನಗರದ ಕೀರ್ತಿ ಗಣೇಶ್ ಎನ್.ಜಿ. ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಜಯಂದರ್ ಶಾಹಿ, ಬೆಳಗಾವಿಯ ಪ್ರಜ್ವಲ್ ಗೌಡರ್ ಮತ್ತು ರಾಮನಗರದ ಪ್ರಖ್ಯಾತ್ ಎಂ.ಪಿ. ಅವರನ್ನು ಎನ್ಎಸ್ಯುಐ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.