<p><strong>ಕೊಳ್ಳೇಗಾಲ:</strong>ವ್ಯವಸಾಯ ಎಂದರೆ ಮೂಗು ತಿರುಗಿಸಿಕೊಂಡು ಹೋಗುವ ಅನೇಕರಿಗೆ ಹಾಗೂ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ರೈತರಿಗೆ ನಗರದ ಬೂದಿತಿಟ್ಟು ಬಡಾವಣೆಯ ನಿವಾಸಿ ಕುಮಾರ್ ಅವರು ಮಾದರಿಯಾಗಿ ನಿಲ್ಲುತ್ತಾರೆ. ತಮ್ಮ ಮಿಶ್ರ ಬೆಳೆಯ ಕೃಷಿಯಿಂದಲೇ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.</p>.<p>ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿ ಪರ ಹಾಗೂ ಮಾದರಿ ರೈತರಾಗಿದ್ದಾರೆ. ಇತರರಿಗೆ ಮಾರ್ಗದರ್ಶಕರೂ ಆಗಿದ್ದಾರೆ.</p>.<p>17 ವರ್ಷಗಳಿಂದ 12 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಆರಂಭಿಸಿದ ದಿನಗಳಲ್ಲಿ ಕುಮಾರ್ ಅವರು ಒಂದೇ ಬೆಳೆ ಬೆಳೆಯುತ್ತಿದ್ದರು. ತಾವುಇತರ ರೈತರಿಗಿಂತ ಭಿನ್ನವಾಗಿರಬೇಕು ಎಂಬಉದ್ದೇಶದಿಂದಮಿಶ್ರ ಬೆಳೆ ಬೆಳೆಯಲು ಆರಂಭಿಸಿದರು.</p>.<p>ಮೆಣಸಿನಕಾಯಿ, ಹೂ ಕೋಸು, ಹಾಗಲಕಾಯಿ, ಟೊಮೆಟೊ, ಕ್ಯಾರೆಟ್, ಬೀನ್ಸ್, ಬದನೆಕಾಯಿ, ಸಿಹಿಕುಂಬಳ, ಬೂದುಕುಂಬಳಕಾಯಿ, ಬೀಟ್ರೂಟ್, ಹೀರೆಕಾಯಿ, ನುಗ್ಗೇಕಾಯಿ, ದಪ್ಪಮೆಣಸಿನ ಕಾಯಿ, ಮೂಲಂಗಿ, ಸೌತೆಕಾಯಿ, ಬಾಳೆ, ಪುದೀನ ಸೂಪ್ಪು, ಕೊತ್ತಂಬರಿ ಸೂಪ್ಪು, ದಂಟು, ಪಾಲಕ್, ಮೆಂತೆ ಸೂಪ್ಪು, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಿದ್ದಾರೆ.</p>.<p class="Subhead">ಆರ್ಥಿಕ ನಷ್ಟವಿಲ್ಲ: ‘ಈವರೆಗೂಮಿಶ್ರಬೆಳೆಯಲ್ಲಿನನಗೆ ಆರ್ಥಿಕ ನಷ್ಟವಾಗಿಲ್ಲ. ಏಕೆಂದರೆ, ಈ ಪದ್ಧತಿಯಲ್ಲಿ ಒಂದು ಬೆಳೆಯಲ್ಲಿ ಕಳೆದುಕೊಂಡ ಹಣ ಮತ್ತೊಂದು ಬೆಳೆಗೆ ಸರಿದೂಗುತ್ತದೆ.ಇದರಿಂದಯಾವುದೇ ನಷ್ಟವಾಗುವುದಿಲ್ಲ’ ಎಂದು ಕುಮಾರ್ ಅವರು ‘ಪ್ರಜಾವಾಣಿ’ಗೆ ಹೇಳಿದರು.</p>.<p class="Subhead"><strong>ಮಿಶ್ರ ಬೆಳೆಯ ಯಶಸ್ಸು:</strong> ಇವರು 12 ಎಕರೆಗೆ ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಎಲ್ಲ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.</p>.<p class="Subhead">ಹಸುವಿನ ಸಗಣಿ, ಮೂತ್ರವೇ ಗೊಬ್ಬರ: ಆರಂಭದಲ್ಲಿ ಇವರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದರು. ಈಗ, ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ಹಸುಗಳ ಮೂತ್ರ, ಸೆಗಣಿಯನ್ನು ಬಳಸುತ್ತಿದ್ದಾರೆ.</p>.<p class="Subhead">‘ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಗುಣಮಟ್ಟ ಹಾಗೂ ಸತ್ವ ಹಾಳಾಗುತ್ತಿದೆ. ಹಸುವಿನ ಗೊಬ್ಬರ ಮಣ್ಣಿನ ಫಲವತ್ತತೆಗೆ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅವರು.</p>.<p class="Subhead"><strong>ಪ್ರಶಸ್ತಿಗೆಭಾಗಿ</strong>: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಮಾರ್ ಅವರನ್ನು ಗುರುತಿಸಿ ಗೌರವಿಸಿದೆ. ಅನೇಕ ಕೃಷಿ ಮೇಳಗಳಲ್ಲಿ ಭಾಗವಹಿಸಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.</p>.<p class="Briefhead"><strong>ಬೇಸಿಗೆಯಲ್ಲಿ ನೀರಿನ ಅಭಾವವಿಲ್ಲ</strong></p>.<p>‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹೆಚ್ಚು ಹರಿಯುತ್ತದೆ. ಇದರಿಂದ ಇಲ್ಲಿನ ರೈತರಿಗೆ ಬೇಸಿಗೆಯಲ್ಲಿ ಹೆಚ್ಚು ಅನುಕೂಲವಾಗಿದೆ. ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಹರಿಯುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ರೈತರು ಮುಂದಾಗಬೇಕು’ ಎನ್ನುವುದು ಕುಮಾರ್ ಅವರ ಸಲಹೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong>ವ್ಯವಸಾಯ ಎಂದರೆ ಮೂಗು ತಿರುಗಿಸಿಕೊಂಡು ಹೋಗುವ ಅನೇಕರಿಗೆ ಹಾಗೂ ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿರುವ ರೈತರಿಗೆ ನಗರದ ಬೂದಿತಿಟ್ಟು ಬಡಾವಣೆಯ ನಿವಾಸಿ ಕುಮಾರ್ ಅವರು ಮಾದರಿಯಾಗಿ ನಿಲ್ಲುತ್ತಾರೆ. ತಮ್ಮ ಮಿಶ್ರ ಬೆಳೆಯ ಕೃಷಿಯಿಂದಲೇ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.</p>.<p>ಒಬ್ಬ ಬೆಳೆದ ಬೆಳೆಯನ್ನೇ ಮತ್ತೊಬ್ಬ ಬೆಳೆದು ಆರ್ಥಿಕ ನಷ್ಟ ಹೊಂದುವರೈತರಿಗೆ ಇವರ ಮಿಶ್ರ ಕೃಷಿ ಪಾಠವಾಗಿ ಪ್ರೇರಕ ಶಕ್ತಿಯಾಗಿದೆ. ಮಿಶ್ರ ಬೆಳೆ ಬೆಳೆದು ಪ್ರಗತಿ ಪರ ಹಾಗೂ ಮಾದರಿ ರೈತರಾಗಿದ್ದಾರೆ. ಇತರರಿಗೆ ಮಾರ್ಗದರ್ಶಕರೂ ಆಗಿದ್ದಾರೆ.</p>.<p>17 ವರ್ಷಗಳಿಂದ 12 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಆರಂಭಿಸಿದ ದಿನಗಳಲ್ಲಿ ಕುಮಾರ್ ಅವರು ಒಂದೇ ಬೆಳೆ ಬೆಳೆಯುತ್ತಿದ್ದರು. ತಾವುಇತರ ರೈತರಿಗಿಂತ ಭಿನ್ನವಾಗಿರಬೇಕು ಎಂಬಉದ್ದೇಶದಿಂದಮಿಶ್ರ ಬೆಳೆ ಬೆಳೆಯಲು ಆರಂಭಿಸಿದರು.</p>.<p>ಮೆಣಸಿನಕಾಯಿ, ಹೂ ಕೋಸು, ಹಾಗಲಕಾಯಿ, ಟೊಮೆಟೊ, ಕ್ಯಾರೆಟ್, ಬೀನ್ಸ್, ಬದನೆಕಾಯಿ, ಸಿಹಿಕುಂಬಳ, ಬೂದುಕುಂಬಳಕಾಯಿ, ಬೀಟ್ರೂಟ್, ಹೀರೆಕಾಯಿ, ನುಗ್ಗೇಕಾಯಿ, ದಪ್ಪಮೆಣಸಿನ ಕಾಯಿ, ಮೂಲಂಗಿ, ಸೌತೆಕಾಯಿ, ಬಾಳೆ, ಪುದೀನ ಸೂಪ್ಪು, ಕೊತ್ತಂಬರಿ ಸೂಪ್ಪು, ದಂಟು, ಪಾಲಕ್, ಮೆಂತೆ ಸೂಪ್ಪು, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ ಬೆಳೆಗಳನ್ನು ಕುಮಾರ್ ಬೆಳೆಯುತ್ತಿದ್ದಾರೆ.</p>.<p class="Subhead">ಆರ್ಥಿಕ ನಷ್ಟವಿಲ್ಲ: ‘ಈವರೆಗೂಮಿಶ್ರಬೆಳೆಯಲ್ಲಿನನಗೆ ಆರ್ಥಿಕ ನಷ್ಟವಾಗಿಲ್ಲ. ಏಕೆಂದರೆ, ಈ ಪದ್ಧತಿಯಲ್ಲಿ ಒಂದು ಬೆಳೆಯಲ್ಲಿ ಕಳೆದುಕೊಂಡ ಹಣ ಮತ್ತೊಂದು ಬೆಳೆಗೆ ಸರಿದೂಗುತ್ತದೆ.ಇದರಿಂದಯಾವುದೇ ನಷ್ಟವಾಗುವುದಿಲ್ಲ’ ಎಂದು ಕುಮಾರ್ ಅವರು ‘ಪ್ರಜಾವಾಣಿ’ಗೆ ಹೇಳಿದರು.</p>.<p class="Subhead"><strong>ಮಿಶ್ರ ಬೆಳೆಯ ಯಶಸ್ಸು:</strong> ಇವರು 12 ಎಕರೆಗೆ ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಎಲ್ಲ ಬೆಳೆಗಳಿಗೆ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಅಗತ್ಯವಿರುವ ಕಡೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.</p>.<p class="Subhead">ಹಸುವಿನ ಸಗಣಿ, ಮೂತ್ರವೇ ಗೊಬ್ಬರ: ಆರಂಭದಲ್ಲಿ ಇವರು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದರು. ಈಗ, ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ಹಸುಗಳ ಮೂತ್ರ, ಸೆಗಣಿಯನ್ನು ಬಳಸುತ್ತಿದ್ದಾರೆ.</p>.<p class="Subhead">‘ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಗುಣಮಟ್ಟ ಹಾಗೂ ಸತ್ವ ಹಾಳಾಗುತ್ತಿದೆ. ಹಸುವಿನ ಗೊಬ್ಬರ ಮಣ್ಣಿನ ಫಲವತ್ತತೆಗೆ ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅವರು.</p>.<p class="Subhead"><strong>ಪ್ರಶಸ್ತಿಗೆಭಾಗಿ</strong>: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಮಾರ್ ಅವರನ್ನು ಗುರುತಿಸಿ ಗೌರವಿಸಿದೆ. ಅನೇಕ ಕೃಷಿ ಮೇಳಗಳಲ್ಲಿ ಭಾಗವಹಿಸಿ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.</p>.<p class="Briefhead"><strong>ಬೇಸಿಗೆಯಲ್ಲಿ ನೀರಿನ ಅಭಾವವಿಲ್ಲ</strong></p>.<p>‘ಈ ಭಾಗದಲ್ಲಿ ಕಬಿನಿ ನಾಲೆ ನೀರು ಹೆಚ್ಚು ಹರಿಯುತ್ತದೆ. ಇದರಿಂದ ಇಲ್ಲಿನ ರೈತರಿಗೆ ಬೇಸಿಗೆಯಲ್ಲಿ ಹೆಚ್ಚು ಅನುಕೂಲವಾಗಿದೆ. ಕೃಷಿ ಜಮೀನುಗಳ ಕೊಳವೆ ಬಾವಿಗಳಲ್ಲಿ ನೀರು ಸದಾ ಹರಿಯುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ರೈತರು ಮುಂದಾಗಬೇಕು’ ಎನ್ನುವುದು ಕುಮಾರ್ ಅವರ ಸಲಹೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>