ಕಲಾಂ ಅವರ ಆದರ್ಶ ವ್ಯಕ್ತಿತ್ವ, ಬಾಲ್ಯದ ಶಿಕ್ಷಣ, ಎಲ್ಲರೊಂದಿಗೆ ಬೆರೆತು ಬಡತನದ ಮೆಟ್ಟಿಲುಗಳಿಂದ ಉನ್ನತ ಶಿಖರಕ್ಕೇರಿದ ಅವರ ಯಶೋಗಾಥೆ ಬಗ್ಗೆ ತಿಳಿಸುವುದೇ ಈ ಚಿತ್ರದ ಉದ್ದೇಶವಂತೆ. ಕಲಾಂ ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಸಾಧನೆ ಅನನ್ಯ. ಅವರದು ಸರಳ ವ್ಯಕ್ತಿತ್ವ. ಪ್ರಸ್ತುತ, ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದರೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಹೇಳಲು ನಿರ್ದೇಶಕ ಶಿವು ಡಿ. ಹಿರೇಮಠ ಹೊರಟಿದ್ದಾರೆ. ಚಿತ್ರಕಥೆಯ ಜವಾಬ್ದಾರಿಯೂ ಅವರದ್ದೇ.