‘ಚಿತ್ರೋದ್ಯಮದಲ್ಲಿ ಯಾವಾಗಲೂ ಪ್ರಸ್ತುತ ಎಂದೆನಿಸಿಕೊಳ್ಳುವುದು ತುಂಬಾ ಕಷ್ಟ. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಚಿಕ್ಕಪುಟ್ಟ ವಿಷಯಗಳನ್ನೂ ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಸಾಧಿಸಲು ಕಠಿಣ ಪರಿಶ್ರಮ ಬೇಕು. ಈ ಕ್ಷೇತ್ರದಲ್ಲಿ ಒಮ್ಮೆ ಸಾಧಿಸಿದೆವು ಎಂದಾದರೆ ಆ ಕೀರ್ತಿ ಕೊನೆಯ ತನಕ ನಮ್ಮೊಂದಿಗೆ ಇರುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನ. ಪ್ರತಿ ಕ್ಷಣವನ್ನೂ ಸವಾಲಾಗಿ ಸ್ವೀಕರಿಸಿ ಮುಂದಡಿಯಿಡುತ್ತಲೇ ಇರಬೇಕು’ ಎಂದಿದ್ದಾರೆ ಅಜಯ್.