ಆಕ್ಷನ್, ಕಟ್ ಇಲ್ಲದ ದಿನ. ಅಭಿಮಾನಿಗಳಿಗೆ ಬೇರೆ ರೀತಿಯ ಆಕ್ಷನ್ ನೋಡುವ ಅವಕಾಶ. ಬೆಳಿಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಎದುರು ಜಮೆಯಾದ ಕಲಾವಿದರು ಮೆರವಣಿಗೆ ಹೊರಟು ಮಧ್ಯಾಹ್ನದ ಹೊತ್ತಿಗೆ ರೇಸ್ಕೋರ್ಸ್ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೇಂದ್ರ ಸರ್ಕಾರದ ಸೇವಾ ತೆರಿಗೆ ನೀತಿ ವಿರೋಧಿಸಿ ಗುರುವಾರ ಚಿತ್ರೋದ್ಯಮ ಮಾಡಿದ ಬಂದ್ನ ಚಿತ್ರವತ್ತಾದ ಕ್ಷಣಗಳಿವು.
ಚಿತ್ರಗಳು: ವಿಶ್ವನಾಥ್ ಸುವರ್ಣ