ಹೈದರಾಬಾದ್ನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ವರ್ಮಾ, ‘ಜನರೆಲ್ಲಾ ನನ್ನಲ್ಲಿ ಸೃಜನಶೀಲತೆ ಮಾಯವಾಗಿದೆ ಎಂದು ಟೀಕಿಸುತ್ತಿದ್ದಾರೆ. ನಾನು ಇಂಥ ಮಾತುಗಳನ್ನು ಒಪ್ಪುವುದಿಲ್ಲ. ನಾನು ದೇವರನ್ನೂ ನಂಬುವುದಿಲ್ಲ. ಆದರೆ, ನಾಗಾರ್ಜುನ ಅವರ ಪ್ರತಿಭೆಯಲ್ಲಿ ನನಗೆ ನಂಬಿಕೆ ಇದೆ. ನಾನು ಏನು ಎಂಬುದನ್ನು ಈ ಚಿತ್ರ ಮತ್ತೊಮ್ಮೆ ಸಾಬೀತುಪಡಿಸಲಿದೆ’ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.