* ಬೆಂಗಳೂರಿಗೆ ಸಮೀಪದಲ್ಲಿರುವ ಬನ್ನೇರುಘಟ್ಟ ಅರಣ್ಯ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವೆಂದು ಘೋಷಣೆ ಮಾಡಿದ್ದು 1971 ರಲ್ಲಿ.
* ದೇಶದಲ್ಲಿಯೇ ಮೊದಲ ಬಾರಿಗೆ ಗಣಕೀಕೃತ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಆರಂಭಿಸಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, 1986 ರಲ್ಲಿ.
* ಚಿತ್ರ ಕಲಾವಿದರಾಗಿ ಹೆಸರು ಮಾಡಿದ್ದ ರುಮಾಲೆ ಚೆನ್ನಬಸವಯ್ಯನವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ರುಮಾಲೆ ಅವರು ಕನ್ನಡದ ಜನಪ್ರಿಯ ದೈನಿಕ ತಾಯಿನಾಡು ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.
* ಮೈಸೂರು ಸರ್ಕಾರ 1920 ರಲ್ಲಿ ಸ್ಥಾಪಿಸಿದ ಮಾನಸಿಕ ರೋಗಿಗಳ ಆಸ್ಪತ್ರೆ ಮೊದಲು ಇದ್ದಿದ್ದು ಕೆಂಪೇಗೌಡ ರಸ್ತೆಯಲ್ಲಿ. ನಂತರ ಇದನ್ನು ಲಕ್ಕಸಂದ್ರಕ್ಕೆ ಸ್ಥಳಾಂತರಿಸಲಾಯಿತು. ಅದೇ ಈಗ ‘ನಿಮ್ಹಾನ್ಸ್’ ಹೆಸರಿನೊಂದಿಗೆ ದೇಶದ ಪ್ರತಿಷ್ಠಿತ ಮಾನಸಿಕ ಆರೋಗ್ಯ ಕೇಂದ್ರವಾಗಿದೆ.
* ಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವಬೆಳೆಸುವ ಉದ್ದೇಶದಿಂದ ಡಾ.ಎಚ್.ನರಸಿಂಹಯ್ಯನವರ ಪ್ರೇರಣೆಯಿಂದ ಬೆಂಗಳೂರು ವಿಜ್ಞಾನ ವೇದಿಕೆ 1962 ರಲ್ಲಿ ಪ್ರಾರಂಭಗೊಂಡಿತು.