ಕನ್ನಡದಲ್ಲಿ ವಿಶೇಷ ಅಂಚೆ ಲಕೋಟೆಯೊಂದು ಪ್ರಥಮವಾಗಿ ಹೊರ ಬಿದ್ದಿದ್ದು 1977ರಲ್ಲಿ, ಅದು ಬರಹಗಾರ ವೈದ್ಯ ಶಿಕ್ಷಣ ತಜ್ಞ ತಾರಾನಾಥರ ಶಾಲೆಗೆ ನೂರು ತುಂಬಿದಾಗ. ಆ ಬಳಿಕ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರ ಜನಶತಮಾನೋತ್ಸವ ಸಂದರ್ಭದಲ್ಲಿ (1984) ವಿಶೇಷ ಲಕೋಟೆ ಬಂತು. ನಂತರದ ದಿನಗಳಲ್ಲಿ ಡಿ.ವಿ.ಜಿ., ಬೀಚಿ, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಕುವೆಂಪು, ಮುದ್ದಣ, ಗೋಪಾಲಕೃಷ್ಣ ಅಡಿಗ, ತರಾಸು, ಬಸವರಾಜ ಕಟ್ಟಿಮನಿ ಅವರ ಹೆಸರು, ಚಿತ್ರ ಹೊತ್ತ ವಿಶೇಷ ಲಕೋಟೆಗಳು ಹೊರ ಬಂದವು.