<p><strong>ಜಮ್ಮು:</strong> ಸ್ಪಷ್ಟ ಜನಾದೇಶ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಕಾಶ್ಮೀರ ವಿವಾದ ಬಗೆಹರಿಸಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಹೇಳಿದರು.<br /> <br /> ಕಾಶ್ಮೀರ ಕಣಿವೆಯನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡುವಂತೆಯೂ ಅವರು ಪ್ರಧಾನಿಗೆ ಮನವಿ ಮಾಡಿದರು. ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಸರ್ಕಾರ ಮತ್ತು ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ರೂಪಿಸಿದ್ದ ನೀತಿಗಳನ್ನು ಮುಂದುವರೆಸಲು ಯುಪಿಎ ಸರ್ಕಾರ ವಿಫಲವಾಗಿದ್ದರಿಂದ ಕಣಿವೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಸೇತುವೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ದೂರಿದರು.<br /> <br /> <strong>ಮೋದಿಗೆ ಶ್ಲಾಘನೆ: </strong>ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, ‘ಮೋದಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಇಡೀ ದೇಶ ಬೆಂಬಲಿಸುತ್ತದೆ’ ಎಂದು ಮೆಹಬೂಬಾ ಹೇಳಿದರು.<br /> <br /> 2015ರ ಡಿಸೆಂಬರ್ನಲ್ಲಿ ಮೋದಿ ದಿಢೀರ್ ಆಗಿ ಲಾಹೋರ್ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಅವರು ಅಂದು ಅಲ್ಲಿನ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಅದು ದೌರ್ಬಲ್ಯ ಅಲ್ಲ; ಬಲ ಮತ್ತು ಅಧಿಕಾರದ ಸಂಕೇತ’ ಎಂದು ವಿವರಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೆಹಬೂಬಾ ಟೀಕಿಸಿದರು.<br /> *<br /> ಒಂದು ವೇಳೆ, ಕಾಶ್ಮೀರ ವಿವಾದಕ್ಕೆ ಯಾರಾದರೂ ಪರಿಹಾರ ಹುಡುಕುತ್ತಾರೆ ಎಂದರೆ ಅದುನರೇಂದ್ರ ಮೋದಿ ಮಾತ್ರ.<br /> <strong>ಮೆಹಬೂಬಾ ಮುಫ್ತಿ </strong><br /> ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು:</strong> ಸ್ಪಷ್ಟ ಜನಾದೇಶ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಕಾಶ್ಮೀರ ವಿವಾದ ಬಗೆಹರಿಸಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಹೇಳಿದರು.<br /> <br /> ಕಾಶ್ಮೀರ ಕಣಿವೆಯನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡುವಂತೆಯೂ ಅವರು ಪ್ರಧಾನಿಗೆ ಮನವಿ ಮಾಡಿದರು. ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಸರ್ಕಾರ ಮತ್ತು ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ರೂಪಿಸಿದ್ದ ನೀತಿಗಳನ್ನು ಮುಂದುವರೆಸಲು ಯುಪಿಎ ಸರ್ಕಾರ ವಿಫಲವಾಗಿದ್ದರಿಂದ ಕಣಿವೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೇಲ್ಸೇತುವೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ದೂರಿದರು.<br /> <br /> <strong>ಮೋದಿಗೆ ಶ್ಲಾಘನೆ: </strong>ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, ‘ಮೋದಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಇಡೀ ದೇಶ ಬೆಂಬಲಿಸುತ್ತದೆ’ ಎಂದು ಮೆಹಬೂಬಾ ಹೇಳಿದರು.<br /> <br /> 2015ರ ಡಿಸೆಂಬರ್ನಲ್ಲಿ ಮೋದಿ ದಿಢೀರ್ ಆಗಿ ಲಾಹೋರ್ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ‘ಅವರು ಅಂದು ಅಲ್ಲಿನ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಅದು ದೌರ್ಬಲ್ಯ ಅಲ್ಲ; ಬಲ ಮತ್ತು ಅಧಿಕಾರದ ಸಂಕೇತ’ ಎಂದು ವಿವರಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೆಹಬೂಬಾ ಟೀಕಿಸಿದರು.<br /> *<br /> ಒಂದು ವೇಳೆ, ಕಾಶ್ಮೀರ ವಿವಾದಕ್ಕೆ ಯಾರಾದರೂ ಪರಿಹಾರ ಹುಡುಕುತ್ತಾರೆ ಎಂದರೆ ಅದುನರೇಂದ್ರ ಮೋದಿ ಮಾತ್ರ.<br /> <strong>ಮೆಹಬೂಬಾ ಮುಫ್ತಿ </strong><br /> ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>