<p><strong>ತಿರುವನಂತಪುರ:</strong> ‘ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್ಎಸ್ಎಸ್ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ಸರ್ಕಾರ ಈಗ ಗೋಹತ್ಯೆ ನಿಷೇಧಿಸಿದೆ. ಮುಂದೆ ಈ ಸರ್ಕಾರ ಮೀನು ತಿನ್ನುವುದನ್ನೂ ನಿಷೇಧಿಸಬಹುದು. ಹೀಗಾಗಿ ಈ ನಿಷೇಧ ಆದೇಶದ ವಿರುದ್ಧ ಜನ ದನಿ ಎತ್ತಬೇಕು’ ಎಂದಿದ್ದಾರೆ.</p>.<p>‘ಭಾರತ ಹಲವು ಧರ್ಮ, ಹಲವು ಸಂಸ್ಕೃತಿಗಳ ರಾಷ್ಟ್ರ. ಬಹುತ್ವವೇ ಭಾರತದ ಜೀವಾಳ. ಕೇಂದ್ರ ಸರ್ಕಾರ ಈ ಬಹುತ್ವವನ್ನು ಒಡೆಯುವಂಥ ಆದೇಶವನ್ನು ಇಂದು ಹೊರಡಿಸಿದೆ’ ಎಂದು ಅವರು ಹೇಳಿದ್ದಾರೆ.</p>.<p>‘ಗೋ ರಕ್ಷಣೆ ಹೆಸರಿನಲ್ಲಿ ಸಂಘ ಪರಿವಾರ ಈವರೆಗೆ ದೇಶದಾದ್ಯಂತ ಹಿಂಸಾಚಾರಗಳನ್ನು ನಡೆಸುತ್ತಾ ಬಂದಿದೆ. ಈಗ ಹೊಸ ಆದೇಶವು ಎಲ್ಲಾ ಜಾನುವಾರುಗಳನ್ನು ಕೊಲ್ಲುವುದರ ಮೇಲೆ ನಿಷೇಧ ಹೇರಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ‘ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್ಎಸ್ಎಸ್ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.</p>.<p>ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ಸರ್ಕಾರ ಈಗ ಗೋಹತ್ಯೆ ನಿಷೇಧಿಸಿದೆ. ಮುಂದೆ ಈ ಸರ್ಕಾರ ಮೀನು ತಿನ್ನುವುದನ್ನೂ ನಿಷೇಧಿಸಬಹುದು. ಹೀಗಾಗಿ ಈ ನಿಷೇಧ ಆದೇಶದ ವಿರುದ್ಧ ಜನ ದನಿ ಎತ್ತಬೇಕು’ ಎಂದಿದ್ದಾರೆ.</p>.<p>‘ಭಾರತ ಹಲವು ಧರ್ಮ, ಹಲವು ಸಂಸ್ಕೃತಿಗಳ ರಾಷ್ಟ್ರ. ಬಹುತ್ವವೇ ಭಾರತದ ಜೀವಾಳ. ಕೇಂದ್ರ ಸರ್ಕಾರ ಈ ಬಹುತ್ವವನ್ನು ಒಡೆಯುವಂಥ ಆದೇಶವನ್ನು ಇಂದು ಹೊರಡಿಸಿದೆ’ ಎಂದು ಅವರು ಹೇಳಿದ್ದಾರೆ.</p>.<p>‘ಗೋ ರಕ್ಷಣೆ ಹೆಸರಿನಲ್ಲಿ ಸಂಘ ಪರಿವಾರ ಈವರೆಗೆ ದೇಶದಾದ್ಯಂತ ಹಿಂಸಾಚಾರಗಳನ್ನು ನಡೆಸುತ್ತಾ ಬಂದಿದೆ. ಈಗ ಹೊಸ ಆದೇಶವು ಎಲ್ಲಾ ಜಾನುವಾರುಗಳನ್ನು ಕೊಲ್ಲುವುದರ ಮೇಲೆ ನಿಷೇಧ ಹೇರಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>