ನವದೆಹಲಿ: ‘ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಕೆಲಸಕ್ಕೆ ಬನ್ನಿ. ಸಂಜೆ 5 ಗಂಟೆವರೆಗೆ ಇಲ್ಲವೇ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಇರಿ’ –ಹೀಗೆಂದು ಸಾಕೇತ್ ಜಿಲ್ಲಾ ನ್ಯಾಯಾಧೀಶರು ತಮ್ಮ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶೀಘ್ರಲಿಪಿಗಾರ್ತಿಯೊಬ್ಬರು ಕಲಾಪದ ಮಧ್ಯದಲ್ಲಿಯೇ ಎದ್ದುಹೋಗಿ ಅವಾಂತರ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ದೇಶನ ಹೊರಬಿದ್ದಿದೆ.
ತೀಸ್ ಹಜಾರಿಯ ವಿಶೇಷ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಾಕ್ಷಿಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಈ ವೇಳೆ ಶೀಘ್ರಲಿಪಿಗಾರ್ತಿ ತಮ್ಮ ಕ್ಯಾಬ್ಗೆ ತಡವಾಗುತ್ತದೆಂದು ಹೇಳಿ ಕರ್ತವ್ಯವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದರು.