ವಿನೋಬಾನಗರ ನಿವಾಸಿ ಸೇಂಥಿಲ್ (25) ಎಂಬುವರು, ಬುಧವಾರ ರಾತ್ರಿ 10.30ರ ಸುಮಾರಿಗೆ ಭಾರತ್ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಕ್ಯಾಬ್ ಚಲಾಯಿಸಿಕೊಂಡು ಬಂದ ಚಂದ್ರಶೇಖರ್, ಅವರಿಗೆ ಡಿಕ್ಕಿ ಮಾಡಿದ್ದರು. ಗುದ್ದಿದ ರಭಸಕ್ಕೆ ಐದಾರು ಅಡಿಯಷ್ಟು ಮೇಲೆ ಎಗರಿದ್ದ ಸೇಂಥಿಲ್, ನಂತರ ಕಾರಿನ ಬಂಪರ್ ಮೇಲೆ ಬಿದ್ದು ರಸ್ತೆಗೆ ಉರುಳಿದ್ದರು.