ಗುರುವಾರ ಪಟ್ನಾಗೆ ಬಂದಿರುವ ಮೀರಾ ಕುಮಾರ್ ಅವರು ಕಾಂಗ್ರೆಸ್ ಮತ್ತು ಆರ್ಜೆಡಿ ಶಾಸಕರ ಜತೆ ಸಂವಾದ ನಡೆಸಿದರು. ಮೇವು ಹಗರಣದ ವಿಚಾರಣೆ ಎದುರಿಸಲು ರಾಂಚಿಯ ನ್ಯಾಯಾಲಯಕ್ಕೆ ತೆರಳಿದ್ದರಿಂದ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಸಂವಾದದ ವೇಳೆ ಹಾಜರಿರಲಿಲ್ಲ. ಇದಕ್ಕೂ ಮುನ್ನ, ಪಟ್ನಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮೀರಾ ಅವರು, ‘ನಾನು ಬಿಹಾರದ ಮಗಳು. ಬಿಹಾರ ನನ್ನ ಹೃದಯದಲ್ಲಿದೆ’ ಎಂದು ಹೇಳಿದ್ದಾರೆ.