ಗುರುವಾರ ಅಫಿಡವಿಟ್ ಸಲ್ಲಿಸಿದ ಠಾಕೂರ್ ‘ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಪ್ರಯತ್ನಿಸಲಿಲ್ಲ. ಅರಿವಿಲ್ಲ ದೆಯೇ ಕೆಲವು ತಪ್ಪುಗಳಾಗಿವೆ. ಮಾಹಿತಿ ವಿನಿಮಯದಲ್ಲಿ ಆಗಿರುವ ವಿಳಂಬವೇ ಇದಕ್ಕೆ ಕಾರಣ. ಇದಕ್ಕಾಗಿ ಬೇಷರತ್ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ಅವರ ಪರವಾಗಿ ಹಿರಿಯ ವಕೀಲ ಪಿ.ಎಸ್.ಪಟ್ವಾಲಿಯಾ ಹಾಜರಾಗಿದ್ದರು.