ಅಲ್ಲದೆ, ‘ಇಂಥದ್ದೇ ವಿಚಾರಕ್ಕೆ ಸಂಬಂಧಿಸಿದಂತೆ 1950ರಲ್ಲಿ ಎಂ.ಪಿ. ಶರ್ಮಾ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವೆ ವ್ಯಾಜ್ಯ ತಲೆದೋರಿತ್ತು. 1960ರಲ್ಲಿ ಅಂಥದ್ದೇ ವ್ಯಾಜ್ಯ ಖಾರಕ್ ಸಿಂಗ್ ಮತ್ತು ಸತೀಶ್ ಚಂದ್ ಅವರ ನಡುವೆಯೂ ತಲೆದೋರಿತ್ತು. ಎರಡೂ ಪ್ರಕರಣಗಳಲ್ಲಿ ಕ್ರಮವಾಗಿ ಎಂಟು ಮತ್ತು ಆರು ಸದಸ್ಯರ ಪೀಠಗಳು, ‘ಖಾಸಗಿತನ ಮೂಲಭೂತ ಹಕ್ಕು ಅಲ್ಲ’ ಎಂದು ತೀರ್ಪು ನೀಡಿದ್ದವು’ ಎಂದರು.