ಮುಂಬೈನ ನಗ್ಪದಾ ಪ್ರದೇಶದಲ್ಲಿ ವಾಸಿಸುವ ಇಕ್ಬಾಲ್ ಉದ್ಯಮಿಗಳಿಗೆ ಸಹೋದರ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ನೀಡುವಂತೆ ಬೆದರಿಸುತ್ತಿದ್ದ. ಇದಕ್ಕೆ ಹೆದರಿದ, ಠಾಣೆ, ಉಲ್ಲಾಸ್ನಗರ, ದೊಂಬಿವಿಲಿಯ ಅನೇಕ ಬಿಲ್ಡರ್ಗಳು ದೊಡ್ಡದ ಮೊತ್ತದ ಹಣವನ್ನು ಕಸ್ಕರ್ಗೆ ಪಾವತಿಸಿದ್ದರು. ಇತ್ತೀಚಿಗೆ ನೋಟು ಅಪನಗದೀಕರಣದಿಂದ ದೊಡ್ಡ ಮೊತ್ತದ ಸಾಲ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಬ್ಬ ಬಿಲ್ಡರ್, ಕಸ್ಕರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಎಎಸಿ ತಂಡವು ಕಸ್ಕರ್ನನ್ನು ಬಂಧಿಸಿದೆ.