ರಾಜ್ಯವರ್ಧನ್ ಆಕ್ರೋಶ: ‘ಗುವಾಹತಿಯು ದೇಶದ ಪ್ರಮುಖ ಕ್ರೀಡಾ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಸಂದರ್ಭದಲ್ಲಿ ನಡೆದಿರುವ ಈ ಘಟನೆಯು ನಾಚಿಕೆಗೇಡಿನದ್ದು. ಭಾರತವು ಆತಿಥ್ಯ ನೀಡುವಲ್ಲಿ ಶ್ರೇಷ್ಠ ಹೆಸರು ಪಡೆದಿದೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ದೇಶದಲ್ಲಿ ಫಿಫಾ ಜೂನಿಯರ್ ವಿಶ್ವಕಪ್ ಫುಟ್ಬಾಲ್ ಮತ್ತು ಕ್ರಿಕೆಟ್ ಸರಣಿಗಳು ನಡೆಯುತ್ತಿವೆ. ಉತ್ತಮ ಆಯೋಜನೆ ನಡೆಯಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.