ಆದರೆ, ನೆಹರೂ ಮೈದಾನದ ಹಿಂಬದಿಯ ಗೇಟ್ ಬಳಿ ಒಳಚರಂಡಿ ಕಾಮಗಾರಿಗಾಗಿ ಅಗೆದು ಮುಚ್ಚಲಾದ ತಗ್ಗಿನಲ್ಲಿ ಬಸ್ಸಿನ ಮುಂಭಾಗದ ಬಲ ಚಕ್ರ ಸಿಲುಕಿತು. ಪ್ರಯಾಣಿಕರನ್ನು ಇಳಿಸಿ ಬಸ್ಸನ್ನು ಮೇಲೆತ್ತಲು ಯತ್ನಿಸಲಾಯಿತು. ಆದರೆ, ಚಕ್ರದ ಅರ್ಧಕ್ಕಿಂತ ಹೆಚ್ಚು ಭಾಗ ಗುಂಡಿಯಲ್ಲಿ ಹೂತುಹೋಗಿದ್ದರಿಂದ ಬಹುಹೊತ್ತಿನವರೆಗೂ ಬಸ್ ಅಲ್ಲಿಯೇ ಸಿಲುಕಿಕೊಂಡಿತ್ತು.