ನಿಷ್ಕ್ರಿಯಗೊಂಡಿದ್ದ ಕಾರಾಗೃಹ ಆಸ್ಪತ್ರೆಯಲ್ಲಿನ ದಂತಚಿಕಿತ್ಸಾ ವಿಭಾಗದ ಪುನರಾರಂಭ ಕಾರ್ಯದಲ್ಲಿ ತಲ್ವಾರ್ ದಂಪತಿಗಳು ಶ್ರಮಿಸಿದ್ದಾರೆ. ಜೈಲು ಸಿಬ್ಬಂದಿ, ಪೊಲೀಸರು ಹಾಗೂ ಅವರ ಮಕ್ಕಳು ಸೇರಿದಂತೆ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಅವರ ಬಿಡುಗಡೆಯ ನಂತರವೂ 15 ದಿನಗಳಿಗೊಮ್ಮೆ ಕೈದಿಗಳಿಗೆ ಚಿಕಿತ್ಸೆ ನೀಡಲು ಬರುವುದಾಗಿ ಭರವಸೆ ನೀಡಿರುವುದಾಗಿ ಕಾರಾಗೃಹದ ವೈದ್ಯ ಸುನಿಲ್ ತ್ಯಾಗಿ ಹೇಳಿದ್ದಾರೆ.