ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಪಟ್ಟಣಕ್ಕೆ ಬಂದಿದ್ದ ಅವರು, ‘ಹಲವು ವರ್ಷಗಳಿಂದ ಬಡ ಮೀನುಗಾರರು ಬೈನಾ ಕಡಲ ತೀರದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಅತಿಕ್ರಮಣ ಮಾಡಿಕೊಂಡಿದ್ದರು ಎಂಬ ಕಾರಣಕ್ಕೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅದರಲ್ಲಿ ಕನ್ನಡಿಗರೇ ಹೆಚ್ಚಿರಬಹುದು. ಪುನರ್ವಸತಿ ಕಲ್ಪಿಸಲು ಮಂಡಳಿಯೊಂದನ್ನು ರಚಿಸಲಾಗಿದೆ’ ಎಂದರು.