ಸವಿತಾ ಸಮಾಜದ ರಾಜ್ಯಾಧ್ಯಕ್ಷ ಯು.ಕೃಷ್ಣಮೂರ್ತಿ, ಕಡಿಮೆ ಪ್ರತಿಫಲ ಪಡೆದು ಸೇವಾಮನೋಭಾವದಿಂದ ಕ್ಷೌರ ಮಾಡುತ್ತಿದ್ದೇವೆ. ಇತ್ತೀಚೆಗೆ ಆದಂತಹ ಸಾಮಾಜಿಕ ಪರಿವರ್ತನೆ, ಜಾಗತಿಕರಣ ಹಾಗೂ ಉದಾರಿಕರಣದಂಥ ಕ್ಷಿಪ್ರ ಬೆಳವಣಿಗೆಗಳಿಂದ ನಾವು ಸಾಮಾಜಿಕ ದಬ್ಬಾಳಿಕೆಗೆ ತುತ್ತಾಗಿದ್ದೇವೆ. ಆರ್ಥಿಕವಾಗಿ ಹಿಂದುಳಿಯಲು ಇದೇ ಮೂಲ ಕಾರಣ ಎಂದರು.